October 18, 2024

ನಟಿ ಅಪರ್ಣಾ ಅವರ ಸಾವಿಗೆ ಚಿತ್ರರಂಗ, ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದು, ಹಿರಿಯ ನಟ ಶ್ರೀನಾಥ್​ ಈ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ನಟ ಶ್ರೀನಾಥ್​, ನಮಗೆ ಆಯಸ್ಸು ಜಾಸ್ತಿ ಆದಷ್ಟು ಜಾಸ್ತಿ ಸಾವುಗಳನ್ನು ನೋಡುತ್ತಿದ್ದೇವೆ.

ನಮ್ಮ ಕಣ್ಮುಂದೆ ಬೆಳೆದ ಮಕ್ಕಳು ಹೋಗುತ್ತಿರುವುದನ್ನು ನೋಡಿದರೆ ನಮಗೆ ಬೇಜಾರಾಗುತ್ತದೆ. ಅಪರ್ಣಾರನ್ನು ಮಗು ಆದಾಗಿನಿಂದ ನೋಡುತ್ತಿದ್ದೆ. ಅಪರ್ಣಾರ ಸಂಸ್ಕಾರ ನೋಡಿದಾಗ ನನಗೆ ಅವರ ತಂದೆ ನಾರಾಯಣಸ್ವಾಮಿ ಅವರು ನೆನಪಾಗುತ್ತಿದ್ದರು. ಅವರ ಮಾತು ಸ್ಪಷ್ಟ ಕನ್ನಡ ಹಾಗೂ ಪದಗಳ ಬಳಕೆಯನ್ನು ಯಾರೂ ಮರೆಯೋಕೆ ಸಾಧ್ಯವಿಲ್ಲ. ಅವರ ನಿಧನದ ಸುದ್ದಿ ತುಂಬಾ ನೋವುಂಟು ಮಾಡಿದೆ. ದುಃಖವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಹಿರಿಯ ನಟ ಶ್ರೀನಾಥ್​ ಹೇಳಿದ್ದಾರೆ.

Leave a Reply

Your email address will not be published. Required fields are marked *