ವ್ಯಕ್ತಿಯೊಬ್ಬ ರಾಜಿ ಪಂಚಾಯಿಗೆ ಬಂದಿದ್ದ ಅತ್ತೆ-ಮಾವನ ಜೊತೆಗೆ ಪತ್ನಿಯನ್ನ ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಯಾದಗಿರಿ ತಾಲೂಕಿನ ಸೈದಾಪುದ ಬಳಿ ನಡೆದಿದೆ. ಪ್ರೀತಿ ಮಾಡಿ ಮದುವೆಯಾಗಿದ್ದ ಜೋಡಿ ಮನಸ್ತಾಪದಿಂದ ಬೇರಾಗಿದ್ದರು. ನಂತರ ಇಬ್ಬರಿಗೂ ರಾಜಿ ಪಂಚಾಯಿತಿ ಮಾಡಿದ ಬಳಿಕ ಒಂದಾಗಿದ್ದರು. ಆದರೆ ಪತ್ನಿಯನ್ನು ಮನೆಗೆ ಬಿಡಲು ಬಂದಿದ್ದ ಅತ್ತೆ-ಮಾವರನ್ನ ಕ್ರೂರಿ ಅಳಿಯ ಕೊಂದೇ ಬಿಟ್ಟಿದ್ದಾರೆ. ಅವರಿಬ್ಬರ ಜೊತೆಗೆ ತಾನೇ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೂ ಕೊಂದಿದ್ದಾನೆ.