September 16, 2024

ಬೆಂಗಳೂರು: ಅಂಗಡಿ ಮುಂದೆ ಇಟ್ಟಿದ್ದ ಗಿಡದ ಪಾಟ್ ಗಳನ್ನೂ ಐನಾತಿ ಕಳ್ಳರು ಎಸ್ಕೇಪ್ ಮಾಡಿರುವ ಘಟನೆ ಬೆಂಗಳೂರಿನ ಹೆಣ್ಣೂರು ಮುಖ್ಯರಸ್ತೆ ಬಳಿಯ ಬಿಳೇಶಿವಾಳೆ ಗ್ರಾಮದಲ್ಲಿ ನಡೆದಿದೆ.  ಕಾರಲ್ಲಿ ಬಂದು ಮೂರು ಅಲಂಕಾರಿಕ ಗಿಡಗಳನ್ನು ಇಬ್ಬರು ಕಳ್ಳರು ಹೊತ್ತೊಯ್ದಿದ್ದಾರೆ.

ನಿನ್ನೆ ರಾತ್ರಿ 12.30ರ ವೇಳೆಗೆ ಈ  ಘಟನೆ ನಡೆದಿದೆ. ಒಂದೂವರೆ ಸಾವಿರ ರೂಪಾಯಿ ಮೌಲ್ಯದ ಗಿಡಗಳ ಕಳ್ಳತನ ಆಗಿದ್ದು, ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Leave a Reply

Your email address will not be published. Required fields are marked *