October 18, 2024

ಅಣ್ಣಿಗೇರಿ: ಚಾಲಕನ ನಿಯಂತ್ರಣ ತಪ್ಪಿದ ಬೈಕ್ ತಡೆಗೋಡೆ ಡಿಕ್ಕಿ ಹೊಡೆದು ಸ್ಥಳದಲ್ಲೆ ಬೈಕ್ ಸವಾರ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ – ಗದಗ ಮಾರ್ಗ ಮಧ್ಯೆ ಬರುವ ಅಣ್ಣಿಗೇರಿ ಸಮೀಪ ಆರ್ಯರ ಪೂಲದ ಹತ್ತಿರ ನಡೆದಿದೆ.

ಸಂದೀಪ ರೆಡ್ಡಿ (26) ಮೃತಪಟ್ಟ ದುರ್ದೈವಿ. ನೇವಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.ಒಂದು ತಿಂಗಳ ರಜೆ ಮುಗಿಸಿ ಕಾರವಾರಕ್ಕೆ ತೆರಳುವಾಗ ಈ ಘಟನೆ ಸಂಭವಿಸಿದೆ. ಮೂಲತ: ತೆಲೆಂಗಾಣದ ನೆಲಗೊಂಡ ಜಿಲ್ಲೆಯ ನಿವಾಸಿ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಣ್ಣಿಗೇರಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *