September 8, 2024

ಹುಬ್ಬಳ್ಳಿ: ನಗರದ ಅಂಜಲಿ‌ ಅಂಬಿಗೇರ ಹಂತಕ ವಿಶ್ವನನ್ನು ಕರೆದುಕೊಂಡು ದಾವಣಗೆರೆಗೆ ತೆರಳಿದ ಸಿಐಡಿ ಅಧಿಕಾರಿಗಳು ಹಂತಕ ವಿಶ್ವ ಕೊಲೆಗೆ ಬಳಸಿದ ಚಾಕುವಿಗಾಗಿ ಹುಡುಕಾಟ ನಡೆಸಿದ್ದಾರೆ.
ಹತ್ಯೆ ನಡೆದು ಇಷ್ಟು ದಿನಗಳು ಕಳೆದರೂ ಇದುವರೆಗೂ ಕೊಲೆಗೆ ಬಳಸಿದ ಚಾಕು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಪತ್ತೆಯಾಗದ ಚಾಕುವಿಗಾಗಿ ಸಿಐಡಿ ಅಧಿಕಾರಿಗಳು ದಾವಣಗೆರೆಗೆ ತೆರಳಿದ ಹುಡುಕಾಟ ನಡೆಸಿದ್ದಾರೆ.
ನಿನ್ನೆ ಹಂತಕ ವಿಶ್ವನನ್ನ ಕರೆದುಕೊಂಡು ದಾವಣಗೆರೆಗೆ ಅಧಿಕಾರಿಗಳು ತೆರಳಿದ್ದಾರೆ.
ಹಂತಕ ದಾವಣಗೆರೆಯಲ್ಲೂ ಕೂಡಾ ಗದಗ ಮೂಲದ ಮಹಿಳೆಗೆ ಚಾಕುವಿ‌ನಿಂದ ಇರದಿದ್ದ.‌ ಹೀಗಾಗಿ ಗದಗ ಮೂಲದ ಮಹಿಳೆಯನ್ನು ಸಿಐಡಿ ವಿಚಾರಣೆ ಮಾಡಿತ್ತು..

Leave a Reply

Your email address will not be published. Required fields are marked *