October 18, 2024

ಹುಬ್ಬಳ್ಳಿ-ಧಾರವಾಡ ಕೋರಿಯರ್ ಬುಕ್ಕಿಂಗ್ ಹಾಗೂ ಹಂಚಿಕೆದಾರರ ಕ್ಷೇಮಾಭಿವೃದ್ಧಿ ಸಂಘ (ರಿ) ದ ವತಿಯಿಂದ ಹಮ್ಮಿಕೊಳ್ಳಲಾದ ಟೈನಿಸ್ ಬಾಲ್ ಕ್ರಿಕೆಟ್ ಟೋರ್ನಾಮೆಂಟ್ ದಿನಾಂಕ: 26/05/2024, ರಂದು JK SCHOOL ಹತ್ತಿರ ಬಿ ಡಿ ಕೆ ಗ್ರೌಂಡ್ ನಲ್ಲಿ ಭಾನುವಾರದಂದು ಯಶಸ್ವಿಯಾಗಿ ಮುಕ್ತಾಯವಾಯಿತು.

ಟೋರ್ನಾಮೆಂಟ್‌ನಲ್ಲಿ ಒಟ್ಟು ಸುಮಾರು ಎಂಟು (8) ತಂಡಗಳು ಭಾಗವಹಿಸಿದ್ದವು. ಈ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡರಾದ ಶ್ರೀ. ರಜತ್ ಉಳ್ಳಾಗಡ್ಡಿಮಠ ಹಾಗೂ ಶ್ರೀ ಅಬ್ದುಲ್ ಗಣಿ ವಲಿ ಅಹ್ಮದ್ ಇವರಿಂದ ಚಾಲನೆ ಕೊಡಲಾಯಿತು.
ಅವರ ಜೊತೆಗೆ ಸಂಪುಟದ ಎಲ್ಲ ಪದಾಧಿಕಾರಿಗಳು ಮತ್ತು ಗೌರವಾನ್ವಿತ ಅಧ್ಯಕ್ಷರು ಉಪಸ್ಥಿತರಿದ್ದರು.
ಅಂತಿಮ ರೋಚಕ ಫೈನಲ್ ಪಂದ್ಯದಲ್ಲಿ ದಿ.ಪ್ರೊಫೆಶನಲ್ ಕೋರಿಯರ್ ತಂಡವನ್ನು ಟಸ್ಕರ್ ಟೈಗರ್ಸ್ ತಂಡವು ಸೋಲಿಸಿ ವಿಜಯಶಾಲಿಯಾಗಿ ಹೊರಹೊಮ್ಮಿ ಪ್ರಶಸ್ತಿ ಗೆದ್ದುಕೊಂಡಿತು.

ಸಂಘದ ಅಧ್ಯಕ್ಷರಾದಂತಹ ಶ್ರೀ ಶಶಿಕುಮಾರ ಎನ್. ಮತ್ತು ಪ್ರಧಾನ ಕಾರ್ಯದರ್ಶಿ ಶಕೀಲ್ ವಲಿಅಹ್ಮದ ಅವರಿಂದ ಸಂಘದ ಎಲ್ಲ ಗೌರವಾನ್ವಿತ ಅಧ್ಯಕ್ಷರಿಗೆ ಸನ್ಮಾಸಲಾಯಿತು. ಅದೇ ರೀತಿ ಸಂಘದ ಖಜಾಂಚಿ ಶ್ರೀ ಮಹಾಂತೇಶ ಕಂಕಣಮೇಲಿ, ಮತ್ತು ಕಾರ್ಯಾಧ್ಯಕ್ಷ ಹಜರತಅಲಿ ಲಕ್ಷ್ಮೇಶ್ವರ ಅವರಿಂದ ಸಂಸ್ಥೆಯ ದಾನಿಗಳಿಗೆ ಸನ್ಮಾಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಪಿ.ಎಸ್. ಪಾಟೀಲ. ಸಹಕಾರ್ಯದರ್ಶಿ, ಚೇತನ ಕುಮಾರ ಉಳ್ಳಿಕಾಶಿ, ವಸಂತ ರಾಠೋಡ, ಎನ್‌‌.ಕುಮಾರ ಸತ್ಯನಪಲ್ಲಿ, ಮೆಹಬೂಬ ತೆಲಗಿ, ರಾಜು ವಿಶ್ವನಾಥ ಹಾಗು ಸಂಘದ ಎಲ್ಲ ಸದಸ್ಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *