September 20, 2024

ಹುಬ್ಬಳ್ಳಿ : ರಾಜ್ಯದಲ್ಲಿ ಪಿಂಜಾರ್ ಸಂಘ ಹುಟ್ಟು ಹಾಕಿದ ಧೀಮಂತ ನಾಯಕ ಡಾಕ್ಟರ್ ಹಾಜಿ ಹೀರೆಹಾಳು ಇಬ್ರಾಹೀಂ ಸಾಬ್ ರವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ರಾಜ್ಯ ನದಾಫ್/ ಪಿಂಜಾರ‌ ಸಂಘ ಹುಬ್ಬಳ್ಳಿ ಹಾಗೂ ಗ್ರಾಮೀಣ ಘಟಕದ ವತಿಯಿಂದ ಹುಬ್ಬಳ್ಳಿಯ ಆನಂದರೂಢ ನಗರದಲ್ಲಿ ಜನ್ಮ‌ದಿನಾಚರಣೆಯನ್ನು ಸಂಭ್ರಮ‌ ಸಡಗರದಿಂದ ಆಚರಿಸಲಾಯಿತು.


ಹೌದು… ರಾಜ್ಯದ ನದಾಫ್ ಪಿಂಜಾರ್ ಸಮುದಾಯದ ಜನರಿಗೆ ಪ್ರವರ್ಗ 1 ರ ಮೀಸಲಾತಿಗೆ ಹೋರಾಡಿ, ರಾಜ್ಯ ನದಾಫ/ ಪಿಂಜಾರ್ ಸಂಘ ಹುಟ್ಟು ಹಾಕಿ ನಮ್ಮೆಲ್ಲರಲ್ಲಿ ಜಾಗೃತಿಯನ್ನು ಮೂಡಿಸಿದಂತಹ ಸಾಮಾಜಿಕ ಕಳಕಳಿಯ ನಾಯಕರು ಅಷ್ಟೇ ಅಲ್ಲದೆ ಈ ಸಮಾಜವನ್ನು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟಂತಹ ಧೀಮಂತ ನಾಯಕ ನಮ್ಮ ಪ್ರೀತಿಯ ಡಾಕ್ಟರ್ ಹಾಜಿ ಹೀರೆಹಾಳು ಇಬ್ರಾಹೀಂ ಸಾಬ್ ಅವರು ಎಂದು ಕೊಂಡಾಡಿದರು‌.
ಈ ಸಂದರ್ಭದಲ್ಲಿ ಮೆಹಬೂಬ್ ಸಾಬ್ ನದಾಫ್ ಖುರಾನ್ ಪಠಣ ಮಾಡಿದರು.
ಈ ವೇಳೆ ಹಜರತ್ ಅಲಿ ದೂಡ್ಡಮನಿ, ಜನಾಬ ಎಮ್. ಎಚ್. ಬೆಂಡಿಗೇರಿ ವಕೀಲರು, ಖುದಾನಸಾಬ ಗೂಗ್ಗಲ್, ಇಸ್ಮಾಯಿಲ್ ನದಾಫ್, ರಾಜೆ ಸಾಬ್ ನದಾಫ್ ಸರ್ ಮಾತನಾಡಿದರು. ದಾವಲಸಾಬ ನದಾಫ್ ಕಾರ್ಯಕ್ರಮ ಸ್ವಾಗತಿಸಿದರು ಮತ್ತು ನಿರೂಪಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಎಮ್. ಎ. ನದಾಫ್, ಹನಿಫ್ ನದಾಫ್, ನಬಿಸಾಬ ನದಾಫ್, ಹಜರತ್ ಅಲಿ ನದಾಫ್, ಖಾದರ್ ಬಾಷಾ, ಶಿಬಾರಗಟ್ಟಿ ಮೌವಲಾಸಾಬ ನದಾಫ್, ರಾಜೇಸಾಬ ನದಾಫ್, ಚಿಂಚಲಿ ಬಾಲೆ ಸಾಬ್ ಪೀಂಜಾರ, ಎನ್ ಎಸ್ ನದಾಫ್, ಪಟೆಲಸಾಬ ನದಾಫ್ ಹಾಗೂ ಪಿಂಜಾರ ಸಮುದಾಯದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *