September 19, 2024

ಹುಬ್ಬಳ್ಳಿ: ಬಿಸಿಲಿನಿಂದ ಕಂಗೆಟ್ಟಿದ್ದ ಹುಬ್ಬಳ್ಳಿ- ಧಾರವಾಡ ಅವಳಿ‌ನಗರದ ಜನತೆಗೆ ಶನಿವಾರ ಸುರಿದ ಮಳೆ ಸಂತಸ ತಂದಿತು. ತುಸು ಬಿಡುವು ನೀಡಿದ ವರುಣ ಮತ್ತೆ 8 ಗಂಟೆಗೆ ತನ್ನ ಆರ್ಭಟ ಮುಂದುವರಿಸಿತು.

ಮಳೆಯಿಂದಾಗಿ ಹುಬ್ಬಳ್ಳಿ ನ್ಯೂ ಕಾಟನ್ ಮಾರ್ಕೆಟ್, ದುರ್ಗದಬೈಲ್, ವಿದ್ಯಾನಗರದ ರಸ್ತೆಗಳು ಜಲಾವೃತವಾಗಿದ್ದವು. ನ್ಯೂ ಕಾಟನ್ ಮಾರ್ಕೆಟ್‌ನ ಶ್ರೀ ವೀರಾಂಜನೇಯ ದೇವಸ್ಥಾನದ ಆವರಣದೊಳಗಿರುವ ಶ್ರೀ ಚಿತ್ರಲಿಂಗೇಶ್ವರ ಮೂರ್ತಿಯು ಜಲಾವೃತವಾಗಿತ್ತು.

Leave a Reply

Your email address will not be published. Required fields are marked *