September 8, 2024

ಹುಬ್ಬಳ್ಳಿ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿನೋದ್ ಅಸೂಟಿ ಗೆಲವು ಸಾಧಿಸಿ ಇತಿಹಾಸ ನಿರ್ಮಿಸುವ ಸಾದ್ಯತೆ ಇದೆ ಎನ್ನಲಾಗುತ್ತಿದೆ.ಇದಕ್ಕೆ ಕಾರಣ ಸಚಿವ ಸಂತೋಷ್ ಲಾಡ್ ಅವರ ತಂತ್ರಗಾರಿಕೆ ಎನ್ನಬಹುದು

ಸದ್ಯ ಸರ್ಕಾರೇತರ ಸಂಸ್ಥೆಯೊಂದು ನೀಡಿರುವ ಮಾಹಿತಿ ಆಧರಿಸಿ ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಈ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ಕಾಯುಡುಕೊಂಡಿದೆ ಎಂದು ಮಾಹಿತಿ ಕಲೆ ಹಾಕಿದೆ ಅದರಲ್ಲಿ ಪ್ರಮುಖವಾಗಿ
ಹುಬ್ಬಳ್ಳಿ-ಧಾರವಾಡ ಪೂರ್ವ,ಕುಂದಗೋಳ ವಿಧಾನಸಭಾ ಕ್ಷೇತ್ರ, ಶಿಗ್ಗಾವಿ ಸವಣೂರು ಕ್ಷೇತ್ರ,ಹಾಗೂ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ ಎನ್ನುವ ಮಾಹಿತಿ ಇದೆ

ಇನ್ನು ಈ ಮುನ್ನಡೆ ಮತಗಳು ಎಷ್ಟು?ಈ ಮತಗಳು ಗೆಲವು ತಂದು ಕೊಡಬಹುದೇ? ಎನ್ನುವ ಆಂತರಿಕ ಚರ್ಚೆ ಇದೀಗ ಜೋರಾಗಿದ್ದು ಸ್ಪಷ್ಟ ಮಾಹಿತಿಗಾಗಿ ರಾಜಕೀಯ ಗಣ್ಯರು ಕಾಯುವುದೇ ಅನಿವಾರ್ಯ ಎಂಬಂತೆ ಸ್ಥಿತಿ ನಿರ್ಮಾಣವಾಗಿದೆ .

Leave a Reply

Your email address will not be published. Required fields are marked *