
ಬೆಂಗಳೂರು: ಕನ್ನಡದ ಸುದ್ದಿ ವಾಹಿನಿ ಸುವರ್ಣ ನ್ಯೂಸ್, ಭಾರತೀಯ ಮುಸ್ಲಿಮರ ಸುದ್ದಿ ಬಿತ್ತರಿಸುವ ಸಮಯದಲ್ಲಿ ಎಡಬಿಡಂಗಿಯಾಗಿ ನಡೆದುಕೊಂಡಿದೆ.
ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಬಿಡುಗಡೆ ಮಾಡಿರುವ ಜನಸಂಖ್ಯಾ ವರದಿ ಕುರಿತು ಸುದ್ದಿ ಮಾಡುವಾಗ ಸುವರ್ಣ ನ್ಯೂಸ್, ಒಂದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.
ಹಿಂದುಗಳ ಜನಸಂಖ್ಯೆ ತಿಳಿಸಲು, ಭಾರತದ ಧ್ವಜ, ಭಾರತೀಯ ಮುಸ್ಲಿಮರ ಜನಸಂಖ್ಯೆ ತಿಳಿಸಲು ಪಾಕ್ ಧ್ವಜ ಬಳಸಿರುವದು ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿದೆ.