September 8, 2024

ಬೆಳಗಾವಿ: ನಗರದ ಮಹಾವೀರ ಭವನ ಮತ್ತು ಪುರಭವನದ ಬಳಿಯ ತಿಲಕವಾಡಿಯಲ್ಲಿ ಕಳ್ಳತನ ನಡೆದಿದ್ದು, ಬೆಲೆಬಾಳುವ ಚಿನ್ನಾಭರಣಗಳನ್ನು ಕಳವು ಮಾಡಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಆರೋಪಿಯನ್ನು ಬೆಳಗಾವಿಯ ಎಸ್.ಉಜ್ವಲಾ ನಗರದ ಸೋಹೈಲ್ ಮೌಲಾ ತಾಶಾವಾಲೆ (26 ವರ್ಷ) ಎಂದು ಗುರುತಿಸಲಾಗಿದ್ದು, ತಿಲಕವಾಡಿ ಪೊಲೀಸ್ ಠಾಣೆ ತಂಡ ಬಂಧಿಸಿದೆ. ಕಳ್ಳನನ್ನು ಯಶಸ್ವಿಯಾಗಿ ಪತ್ತೆ ಹಚ್ಚಿ ಕಳವು ಮಾಡಿದ್ದ 4 ಲಕ್ಷ 10 ಸಾವಿರ ಮೌಲ್ಯದ 58.4 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *