October 18, 2024

ಅಣ್ಣಿಗೇರಿ : ಭದ್ರಾಪುರ ಗ್ರಾಮದಲ್ಲಿ ಅಣ್ಣಿಗೇರಿ ಪೊಲೀಸ್‌ ಠಾಣೆಯಿಂದ ಲೋಕಸಭಾ ಚುನಾವಣೆ ಅಂಗವಾಗಿ ಶಾಂತಿ ಸುವ್ಯವಸ್ಥೆಗಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶನಿವಾರ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು.

ಪಿಎಸ್‌ಐ ಸಿದ್ದಾರೂಢ ಆಲದಕ್ಕಟಿ ನೇತೃತ್ವದಲ್ಲಿ ಹಮ್ಮಿಕೊಂಡ ಪಥ ಸಂಚಲನ 50 ಕ್ಕೂ ಹೆಚ್ಚು ಪೊಲೀಸರು ಸಂಚರಿಸಿ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಿದರು. ಅರ್ಹ ಮತದಾರರು ಮೇ 7 ಕ್ಕೆ ತಮ್ಮ ಹತ್ತಿರದ ಮತಗಟ್ಟೆಗೆ ತೆರಳಿ ಯಾವುದೇ ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡಲು ಮನವಿ ಕೂಡಾ ಮಾಡಿದರು.

Leave a Reply

Your email address will not be published. Required fields are marked *