January 13, 2026
11.1

ಕಿತ್ತೂರು ಮತಕ್ಷೇತ್ರದಲ್ಲಿ ಮತಯಾಚನೆ ನಡೆಸುತ್ತಿದ್ದ ಶಾಸಕರಿಗೆ ತರಾಟೆ. ಕಿತ್ತೂರು ಮತಕ್ಷೇತ್ರದ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ನಡೆದ ಮತಭೇಟೆ ವೇಳೆ ನಡೆದ ಘಟನೆ.ಕಿತ್ತೂರು ಮತಕ್ಷೇತ್ರದ ಶಾಸಕ ಮಹಾಂತೇಶ ದೊಡಗೌಡರ ಅವರಿಂದ ಮತಭೇಟೆ. ವಿವಿಧ ಸಮಸ್ಯೆಗಳ ಕುರಿತು ಚರ್ಚೆ ಮಾಡುತ್ತಲೆ ಅತಿರೇಖಕ್ಕೆ ಹೋದ ಗಲಾಟೆ. ಶಾಸಕ ಮಹಾಂತೇಶ ದೊಡಗೌಡರ ಅವರನ್ನ ತರಾಟೆ ತೆಗೆದುಕೊಂಡು ಗ್ರಾಮಸ್ಥರು. ಹಲವು ವರ್ಷಗಳಿಂದ ಶಾಸಕರು ಚಿಕ್ಕಬಾಗೇವಾಡಿ ಗ್ರಾಮಕ್ಕೆ ಬರದೇ ಇರುವುದು ಖಂಡನೀಯ ಎಂದ ಗ್ರಾಮಸ್ಥರು.

ಗ್ರಾಮದ ಯುವಕ ಶಂಕರಗೌಡ ನೇತೃತ್ವದಲ್ಲಿ ಶಾಸಕರಿಗೆ ತರಾಟೆ. ರಸ್ತೆ,ಚರಂಡಿ,ಜಲಜೀವನ್ ಮಿಷನ್ ಯೋಜನೆ ಕುರಿತು ಅಕ್ರೋಶ ಹೊರ ಹಾಕಿದ ಗ್ರಾಮಸ್ಥರು. ಗಲಾಟೆ ಸ್ಥಳದಿಂದ ಕಾಲ್ಕಿತ್ತ ಶಾಸಕ ಮಹಾಂತೇಶ ದೊಡಗೌಡರ. ಗ್ರಾಮದೇವತೆ ಆಶಿರ್ವಾದ ತೆಗೆದುಕೊಂಡ ಬಂದ ತಕ್ಷಣವೇ ಶಾಸಕರಿಗೆ ತರಾಟೆ.

ಚಿಕ್ಕಬಾಗೇವಾಡಿ ಗ್ರಾಮದ ಪ್ರತಿ ಮನೆ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದ್ದ ದೊಡಗೌಡರ. ಚಿಕ್ಕಬಾಗೇವಾಡಿ ಗ್ರಾಮದ ನೂರಾರು ಅಭಿಮಾನಿಗಳ ನೇತೃತ್ವದಲ್ಲಿ ಮತಭೇಟೆ ನಡೆಸಿದ ಶಾಸಕ ದೊಡಗೌಡರ. ಚಿಕ್ಕಬಾಗೇವಾಡಿ ಗ್ರಾಮದ ಮುಖಂಡರ ಸಮ್ಮುಖದಲ್ಲೇ ತರಾಟೆ ತೆಗೆದುಕೊಂಡು ಗ್ರಾಮಸ್ಥರು.

Leave a Reply

Your email address will not be published. Required fields are marked *