October 18, 2024

ಬೀದರ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಬೀದರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶಿವಕುಮಾರ ಸ್ವಾಮಿ ಇವರು ದಿನಾಂಕ:16/01/2023 ರಂದು ಸಂಜೆ ವಾಣಿ ಪತ್ರಿಕೆಯಲ್ಲಿ, ನಮ್ಮ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಒಂದು ನಕಲಿ ಸಂಘಟನೆ ಹುಟ್ಟು ಹಾಕಿ ನೈಜ ಪತ್ರಕರ್ತರನ್ನು ದಾರಿ ತಪ್ಪಿಸಲು ಹೊರಟಿರುವರು ಎಂದು ಹಾಗೂ ಅವಮಾನಕರ ಹೇಳಿಕೆ ಬೀದರ ಸಂಜೆವಾಣಿ ಪತ್ರಿಕೆಯಲ್ಲಿ ಬಿತ್ತರಿಸಿದ್ದಾರೆ.

ಆದರೆ ನಮ್ಮ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಎಂಬ ಸಂಘಟನೆಯು ಈಗಾಗಲೇ ನೋದಣಿ ಆಗಿರುತ್ತದೆ.ಆದರಿಂದ ನೋಂದಾಯಿತ ಸಂಘಟನೆಯನ್ನು ನಕಲಿ’ ಎಂದು ಪತ್ರಿಕಾ ಪ್ರಕಟಣೆ ಮೂಲಕ ವರದಿ ಮಾಡಿರುವ ಒಬ್ಬ ಜವಾಬ್ದಾರಿಯುತವಾಗಿರುವರು, ರಾಜ್ಯ ಮಟ್ಟದಲ್ಲಿ ಪತ್ರಕರ್ತರ ಪರವಾಗಿ ಹೋರಾಟ ಮಾಡುತ್ತಿರುವ ಬಂಗ್ಲ ಮಲ್ಲಿಕಾರ್ಜುನ ಇವರ ವಿರುದ್ಧ ಅವಹೇಳನಕಾರಿ ಹಾಗೂ ಹಾಗೂ ಬೇಜವಾಬ್ದಾರಿಯುತ ಹೇಳಿಕೆ ನೀಡಿರುವ ಶಿವಕುಮಾರ ಸ್ವಾಮಿ, ನೋಂದಾಯಿತ ಸಂಘಟನೆಯ ಹೆಸರಿಗೆ ಕಪ್ಪು ಮಸಿ ಬಳೆಯುವ, ಹಾಗೂ ಸಮಾಜದಲ್ಲಿ ಕೆಟ್ಟ ಹೆಸರು ಸಂದೇಶ ಮೂಡಿಸುವ ಮಾನ ನಷ್ಟ ಮಾಡುತ್ತಿರುವ ಕುರಿತು ಇವರ ಮೇಲೆ ಸೂಕ್ತ ಕ್ರಮ ವಹಿಸಿ ಪ್ರಕರಣ ದಾಖಲಿಸಲು ರಾಮದುರ್ಗ ತಾಲೂಕಾ ದಂಡಧಿಕಾರಿಗಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಧ್ಯಕ್ಷ ಎಂ ಕೆ ಯಾದವಾಡ ನೆತ್ರೋತ್ವದಲ್ಲಿ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಉಪಾಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *