September 8, 2024

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ  ಜೈಲು ಸೇರಿರುವ ನಟ ದರ್ಶನ್ ಆಯಂಡ್ ಗ್ಯಾಂಗ್‌ಗೆ ಪೊಲೀಸರು  ಬಿಗ್ ಶಾಕ್ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಪ್ರಕರಣದ ತನಿಖೆಯನ್ನ ಕಾಮಾಕ್ಷಿಪಾಳ್ಯ ಪೊಲೀಸರು  ಮತ್ತಷ್ಟು ತೀವ್ರಗೊಳಿಸಿದ್ದು, ಆದಷ್ಟು ಬೇಗ ತನಿಖೆ ಪೂರ್ಣಗೊಳಿಸೋ ಉಮೇದಿನಲ್ಲಿದ್ದಾರೆ.

ಇದರ ನಡುವೆಯೇ ಆರೋಪಿಗಳಿಗೆ ಜಾಮೀನು  ನೀಡದಂತೆ ಪೊಲೀಸರು ಮತ್ತೆ ರಿಮ್ಯಾಂಡ್ ಅರ್ಜಿ ಸಿದ್ಧಪಡಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪೊಲೀಸರು ಗುರುವಾರ ಪುನಃ ನ್ಯಾಯಾಲಯಕ್ಕೆ ರಿಮ್ಯಾಂಡ್ ಅರ್ಜಿ ಸಲ್ಲಿಸುವ ಸಾಧ್ಯತೆ ಇದ್ದು, ನ್ಯಾಯಾಂಗ ಅವಧಿ ಮುಕ್ತಾಯ ಹಿನ್ನಲೆ ಪೊಲೀಸರಿಂದ ಮತ್ತೆ ರಿಮ್ಯಾಂಡ್ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ. ಅರ್ಜಿ ಸಲ್ಲಿಕೆ ವೇಳೆ ಹಲವು ಕಾರಣಗಳನ್ನ ನ್ಯಾಯಾಲಯದ ಗಮನಕ್ಕೆ ತರುವ ಕೆಲವನ್ನು ಪೊಲೀಸರು ಮಾಡಲಿದ್ದಾರಂತೆ. ಆರೋಪಿಗಳಿಗೆ ಜಾಮೀನು ನೀಡದಂತೆ ಹಲವು ಕಾರಣಗಳನ್ನ ಮುಂದಡಿರಲಿದ್ದು, ಈಗಾಗಲೇ ಹತ್ತಕ್ಕೂ ಹೆಚ್ಚು ಕಾರಣಗಳನ್ನ ಸಿದ್ದಪಡಿಸಿದ್ದಾರಂತೆ.

Leave a Reply

Your email address will not be published. Required fields are marked *