September 17, 2024

ಬೆಳಗಾವ್ ಜಿಲ್ಲೆ ರಾಮದುರ್ಗ ತಾಲೂಕಿನ ಬನ್ನೂರು ತಾಂಡಾದಲ್ಲಿ ನಿನ್ನೆ ತಡರಾತ್ರಿ ಸುಮಾರು 3:00 ಗಂಟೆಗೆ ಎಂಟು ಜನ ದರೋಡೆಕೋರರು ರಾಮದುರ್ಗ್ ತಾಲೂಕಿನ ಬನ್ನೂರ್ ಗ್ರಾಮ ಪಂಚಾಯಿತಿಯ ಸದಸ್ಯರಾದ ಚಂದ್ರು ಶಂಕರ ರಜಪೂತ ಎಂಬವರ್ ಬನ್ನೂರ್ ತಾಂಡಾದಲ್ಲಿ ಇರುವ ಮನೆಯಲ್ಲಿ ನಡೆದ ಘಟನೆ..

ದರೋಡೆಕೋರರು ಬಾಯಿ ಮತ್ತು ಕೈಕಟ್ಟಿ ಚಾಕು, ಚೂರಿ ತೋರಿಸಿ ಸುಮಾರು 23 ಲಕ್ಷ 60ಅರವತ್ತು ಸಾವಿರ ರೊಪಾಯಿ ಮತ್ತು ಹತ್ತರಿಂದ ಹನ್ನೆರಡು ತೊಲೆ ಬಂಗಾರ ದರೋಡೆ ಮಾಡಿದ್ದಾರೆ.

ಈ ಘಟನೆ ತಡರಾತ್ರಿ ಸುಮಾರು 3:00 ಗಂಟೆಗೆ ನಡದಿದೆ ಮನೆಯ ಮುಖ್ಯ ದ್ವಾರದ ಬೆಲ್ಲೆ ಬಾರಿಸಿದರು ಮನೆಯ ಮಾಲೀಕನ ಹೆಂಡತಿ ಯಾರು ಬಂದಿದ್ದಾರೆ ಎಂದು ಬಾಗಿಲು ತೆಗೆದಿದ್ದಾರೆ ಬಾಗಿಲು ತೆಗೆದ ತಕ್ಷಣವೇ ಒಬ್ಬ ಡಕಾಯಿತ ಒಂದು ಹೇಟು ಹೊಡೆದಿದ್ದಾನೆ ಮತ್ತು ಬಾಯಿಗೆ ಬಟ್ಟೆ ಕಟ್ಟಿ ಎಂಟು ಜನ ಡಕಾಯಿತರು ಮನೆವಳಗೆ ನುಗ್ಗಿದರು ಏನಾಯ್ತು ಎಂದು ಮನೆ ಮಾಲೀಕರಾದ ಚಂದ್ರು ಶಂಕರ ರಜಪೂತ ಬಂದು ನೋಡುತ್ತಿದ್ದಂತೆ ಚಂದ್ರು ರಜಪೂತ ಅವರಿಗೆ ಚಾಕುಯಿಂದ ಹಲ್ಲೆ ಮಾಡಲು ಮುಂದಾದರೂ ಅಷ್ಟೇರಲ್ಲಿ ಚಂದ್ರು ಬಚಾವ ಮಾಡಲು ಪ್ರೆತ್ನ ಮಾಡಿದರು ಚಾಕು ಚಂದ್ರುವಿನ ಕೈಗೆ ತಾಗಿದೆ ಸ್ವಲ್ಪ ಗಾಯವಾಗಿದೆ ನಾಲ್ಕು ಡಕಾಯಿತರು ಚಂದ್ರು ಅವರಿಗೆ ಹಿಡಿದು ಬಾಯಿಗೆ ಬಟ್ಟೆ ಕಟ್ಟಿ ಹಾಗೂ ಕೈ ಕಾಲು ಕಟ್ಟಿದರು ಅಷ್ಟೇರಲ್ಲಿ ಮನೆಯಲ್ಲಿದ್ದ ಚಂದ್ರು ಅವರ ಸೊಸೆ ಬಂದ ಕೊಡಲೆ ಅವರಿಗೆ ಬಾಯಿಗೆ ಬಟ್ಟೆ ಕಟ್ಟಿ ಹಾಗೂ ಕೈ ಕಾಲು ಕಟ್ಟಿದರು.

ದುಡ್ಡ ಇದ್ದ ಅಲ್ಮಾರಿಯ ಕೀಲಿ ಕೇಳಿದ್ದಾರೆ ನನ್ನ ಹತ್ತಿರ ಇಲ್ಲಾ ಅಂದ ತಕ್ಷಣ ಅಲ್ಮಾರಿಯನ್ನು ಮುರಿದು ದುಡ್ಡು ಮತ್ತು ಬಂಗಾರ ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ ಘಟನಾ ಸ್ಥಳಕ್ಕೆ ರಾಮದುರ್ಗ CPI ಅಯ್ ಆರ್ ಪಟ್ಟಣಶಟ್ಟಿ ಮತ್ತು ಕಟಕೊಳ PSI ಸಿದ್ದರಾಮಪ್ಪ ಉನ್ನದ ಭೇಟಿ ನೀಡಿ ಪರಿಶೀಲನೆ ನಡಸಿದರು ಬೆಳಗಾವಿ ಪೊಲೀಸ್ ಇಲಾಖೆಯ ಘಟನಾ ಸ್ಥಳಕ್ಕೆ ಶ್ವಾನವದಳಕ್ಕೆ ಕರಿಸಿ ಶ್ವಾನವದಳದವರು ಶ್ವಾನವ ಸಾಹಾಯದಿಂದ ಪರಿಶೀಲನೆ ನಡಸಿದ್ದಾರೆ.
ವರದಿ, ಎಂ ಕೆ ಯಾದವಾಡ ರಾಮದುರ್ಗ.

Leave a Reply

Your email address will not be published. Required fields are marked *