September 17, 2024

ಹುಬ್ಬಳ್ಳಿ : ಸಿಆರ್‌ಪಿಎಫ್‌ನಲ್ಲಿ ಕೆಲಸ ಮಾಡುತ್ತಿರುವ ಅಣ್ಣಿಗೇರಿಯ ಕೊಟ್ರೇಶ ಜಗದೇವಪ್ಪ ಅಕ್ಕಿ ಎಂಬುವರು ನನ್ನ ಮೇಲೆ ಬಲತ್ಕಾರಕ್ಕೆ ಯತ್ನಿಸಿ, ಕೊಲೆ ಮಾಡಲು ಮುಂದಾಗಿದ್ದರು ಎಂದು ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದ ರೇಣುಕಾ ಮಲ್ಲಪ್ಪ ಪಟ್ಟೇದ ಎಂಬುವರು ವಿರುದ್ಧ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಭಾನುವಾರ ದೂರು ದಾಖಲಿಸಿದ್ದಾರೆ.

 

ಬಟ್ಟೆ ಖರೀದಿಗೆಂದು ಹುಬ್ಬಳ್ಳಿಗೆ ಬಂದಿದ್ದೆ. ಸಮೀಪದ ಸಂಬಂಧಿಯಾದ ಕೊಟ್ರೇಶ ಜಗದೇವಪ್ಪ ಅಕ್ಕಿ, ಮೂರುಸಾವಿರಮಠದ ಬಳಿಯಿಂದ ಕಾರಿನಲ್ಲಿ ಕರೆತಂದು ಸಿದ್ದಾಪುರ- ಶಿರಸಿ ರಸ್ತೆಯ ಕಸ್ತೂರು ಹತ್ತಿರ ಮಣ್ಣಿನ ರಸ್ತೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಲು ಮುಂದಾದ. ನಾನು ನಿರಾಕರಿಸಿದ್ದಕ್ಕೆ ಹಲ್ಲೆ ಮಾಡಿ ಕೊಲೆಗೆ ಮುಂದಾಗಿದ್ದ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

 

ಮದುವೆ ಆಗಿಲ್ಲದ ನಾನು ನನ್ನ ತಮ್ಮನೊಂದಿಗೆ ವಾಸವಿದ್ದೇನೆ. ನನ್ನ ಸಂಬಂಧಿ ಕೊಟ್ರೇಶನ ಹೆಂಡತಿ ಬಾಣಂತನಕ್ಕೆ ಹೋಗಿದ್ದಾಗ ಪರಿಚಯವಾಗಿದ್ದ. ನಮ್ಮ ಮನೆಗೂ ಬಂದು ಹೋಗುತ್ತಿದ್ದ. ಜೂ. 15ರಂದು ಬಟ್ಟೆ ಖರೀದಿಗೆ ಹುಬ್ಬಳ್ಳಿಗೆ ಹೋಗಿದ್ದಾಗ ಫೋನ್ ಮಾಡಿ ನಂತರ ಮೂರುಸಾವಿರ ಮಠದ ಹತ್ತಿರ ಬೂದು ಬಣ್ಣದ ಕಾರಿನಲ್ಲಿ ಬಂದು ನಿನ್ನ ಅಕ್ಕ ಮಾತನಾಡಬೇಕಂತೆ ಬಾ ಎಂದು ಕಾರಿನಲ್ಲಿ ಕೂರಿಸಿಕೊಂಡು ಹೊರಟ. ಹುಬ್ಬಳ್ಳಿ ದಾಟಿ ಮುಂದೆ ಹೋಗತೊಡಗಿದಾಗ ಎಲ್ಲಿಗೆ ಕರೆದುಕೊಂಡು ಹೋಗುತ್ತಿ ಎಂದಾಗ ಇಲ್ಲೆ ಇದ್ದಾಳೆ ಎಂದು ಮುಂದೆ ಹೊರಟ. ನಾನು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದೆ. ಇಡೀ ರಾತ್ರಿ ಎಲ್ಲೆಲ್ಲೋ ಓಡಾಡಿಸಿ ಜೂ. 16ರ ಬೆಳಗಿನ 6 ಗಂಟೆ ಸುಮಾರಿಗೆ ಸಿದ್ದಾಪುರದ ಕಸ್ತೂರು ಸಮೀಪದ ಮುಖ್ಯರಸ್ತೆಯಿಂದ ಒಳ ಮಣ್ಣಿನ ರಸ್ತೆಯಲ್ಲಿ ಕಾರನ್ನು ಓಡಿಸತೊಡಗಿದ, ನಾನು ಗಾಬರಿಯಿಂದ ಎಲ್ಲಿಗೆ ಹೋಗುತ್ತಿಯಾ ಅಂತ ಕೇಳಿದೆ. ಆ ರಸ್ತೆಯಲ್ಲಿ ಸುಮಾರು ದೂರದವರೆಗೆ ಹೋಗಿ ಕಾರು ನಿಲ್ಲಿಸಿ ನನ್ನ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ, ನಾನು ವಿರೋಧಿಸಿದೆ. ಆಗ ಅವಾಚ್ಯ ಶಬ್ದದಿಂದ ಬೈಯುತ್ತ ಅಲ್ಲೆ ಬಿದ್ದಿದ್ದ ಬಿಯರ್ ಬಾಟಲಿಯಿಂದ ನನ್ನ ತಲೆಗೆ ಹೊಡೆದು ಬಾಟಲಿಯಿಂದ ನನಗೆ ಚುಚ್ಚಲು ಮುಂದಾದಾಗ ನಾನು ಕೈ ಅಡ್ಡಮಾಡಿದೆ. ಆಗ ನನ್ನ ಕೈಗೆ ಗಾಯವಾಗಿದೆ. ನಾನು ಅಲ್ಲಿಂದ ಓಡ ತೊಡಗಿದಾಗ ನನ್ನ

ಮೇಲೆ ಕಾರು ಹತ್ತಿಸಲು ಪ್ರಯತ್ನಿಸಿದ ನಾನು ಸತ್ತು ಹೋದವರಂತೆ ನಾಟಕ ಮಾಡಿ ನಂತರ ಸ್ಥಳೀಯರ ಸಹಾಯದಿಂದ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆದು ದೂರು ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *