September 16, 2024

ಉತ್ತರಪ್ರದೇಶ: ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿರುವ ಘಟನೆ ಉತ್ತರಪ್ರದೇಶದ ಸುಲ್ತಾನ್​ಪುರದಲ್ಲಿ ನಡೆದಿದೆ. ಪ್ರೇಮಿಗಳಿಬ್ಬರು ನೀರಿಗೆ ಜಿಗಿಯುತ್ತಲೇ ಅಲ್ಲೇ ನೀರಿನಲ್ಲಿ ಮೀನು ಹಿಡಿಯಲು ಬಲೆ ಬೀಸಿ ಕುಳಿತ್ತಿದ್ದ ಮೀನುಗಾರರು ಇವರಿಬ್ಬರನ್ನು ಕಂಡು ನದಿಗೆ ಜಿಗಿದಿದ್ದಾರೆ.

https://x.com/askrajeshsahu/status/1801917794058895466

ಮೀನುಗಾರರ ಬಳಗ ಯುವತಿ ಮತ್ತು ಯುವಕ ಇಬ್ಬರನ್ನು ಸಾವಿನ ದವಡೆಯಿಂದ ರಕ್ಷಿಸಿದ್ದಾರೆ.  ದಡಕ್ಕೆ ಕರೆತಂದು ನಂತರ ಪ್ರೇಮಿಗಳಿಬ್ಬರಿಗೆ ಬುದ್ದಿವಾದ ಹೇಳಿದ್ದಾರೆ. ನೀರಿಗೆ ಜಿಗಿದ ಯುವಕನನ್ನು ದಡಕ್ಕೆ ಎಳೆದೊಯ್ದ ಮೀನಗಾರರೊಬ್ಬರು, ಯುವಕನ ಕಪಾಳಕ್ಕೆ ಬಾರಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *