ಹುಬ್ಬಳ್ಳಿ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಗೆಲುವಿಗೆ ಶ್ರಮಿಸಿದ ನಾಯಕರಲ್ಲಿ ಅತಿ ಹೆಚ್ಚು ಯೋಗದಾನ ನೀಡಿದವರು ಮತ್ತು ಶ್ರಮವಹಿಸಿ ಗೆಲುವಿಗಾಗಿ ಹಗಲಿರುಳು ದುಡಿದವರಲ್ಲಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರ ಕೊಡುಗೆ ಹೆಚ್ಚಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಡಿಕೆ ಶಿವಕುಮಾರ್ ಆಪ್ತ ಷಹಜಮಾನ್ ಮುಜಾಹಿದ್ ಪತ್ರಿಕಾ ಪ್ರಕಟಣೆ ನೀಡಿದ್ದಾರೆ
ಕಳೆದ ಮೂರು ಬಾರಿ ಚುನಾವಣೆಗಿಂತಲೂ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಯಿತು ಅಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಪಕ್ಷದ ಅಭ್ಯರ್ಥಿ ವಿನೋದ್ ಅಸೋಟಿಗೆ ಅತಿ ಹೆಚ್ಚು ಲೀಡ್ ಕೊಟ್ಟ ಕ್ಷೇತ್ರ ಪೂರ್ವ ಕ್ಷೇತ್ರವಾಗಿದ್ದು. ಇದಕ್ಕಾಗಿ ಪ್ರಸಾದ ಅಬ್ಬಯ್ಯ ಸಾಕಷ್ಟು ಶ್ರಮವಹಿಸಿದ್ದರು ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಒಳ್ಳೆಯ ಫಲಿತಾಂಶ ನೀಡಿದರು ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ. ಇದನ್ನ ಪಾಠವಾಗಿ ತೆಗೆದುಕೊಂಡು ಮುಂದಿನ ಬಾರಿ ಶತಾಯಗತಯ ಗೆಲುವು ಸಾಧಿಸುವ ತಂತ್ರಗಾರಿಕೆಯನ್ನು ಈಗಿಂದಲೇ ರೂಪಿಸಬೇಕು ಅನ್ನೋದನ್ನ ಮುಜಾಯಿದ್ ತಿಳಿಸಿದ್ದಾರೆ
ಸದ್ಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೋಲು ಗೆಲುವಿನ ಲೆಕ್ಕಾಚಾರ ಹಾಗೂ ಆತ್ಮಾವಲೋಕನ ಸಭೆಯನ್ನು ಕ್ಷೇತ್ರದಾದ್ಯಂತ ನಡೆಸುತ್ತಿದ್ದು ಕಾರ್ಯಕರ್ತರ ಕೂಡ ಎಂದು ಹೇಳಿದ್ದಾರೆ