October 18, 2024

ಹುಬ್ಬಳ್ಳಿ : ಅಂಜಲಿ ಅಂಬಿಗೇರ ಕೊಲೆ ಆರೋಪಿ ಸದ್ಯ ಸಿಐಡಿ ವಶದಲ್ಲಿದ್ದಾನೆ ಈ ಬೆನ್ನಲ್ಲೇ ಇದೀಗ ಕುಟುಂಬದ ಸದಸ್ಯರು ಈ ಹಿಂದೆ ದಾಖಲಾಗಿದ್ದ ಪೋಕ್ಸೋ ಪ್ರಕರಣದ ಆರೋಪಿಯನ್ನು ಕೂಡ ವಿಚಾರಣೆ ನಡೆಸಬೇಕು ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಬಗ್ಗೆ ಅಂಜಲಿ ಸಹೋದರಿ ಮಾದ್ಯಮದ ಮೂಲಕ ದ್ವನಿ ಎತ್ತಿದ್ದಾರೆ.

ಅಂಜಲಿ ಅಂಬಿಗೇರಗೆ 17 ವರ್ಷ ವಯಸ್ಸು ಇದ್ದಾಗ ಬಸಯ್ಯ @ವಿಜಯ ಹಿರೇಮಠ ಪ್ರೀತಿಸುತ್ತಿದ್ದ ಆ ಸಮಯದಲ್ಲಿ ಬಿಜೆಪಿ ಮುಖಂಡ ಅನುಪ್ ಬೀಜವಾಡ ಅಂಜಲಿಗೆ ಬುದ್ದಿ ಹೇಳಿದ್ದರು. ಈ ಸಮಯದಲ್ಲೇ ಆತನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದೇವೆ.ಆ ಸಮಯದ ಆರೋಪಿ ವಿಜಯ್ ಹಿರೇಮಠ ಪ್ರಭಾವಿ ಮುಖಂಡರಾಗಿರುವ ಕಾರ್ಪೊರೇಟರ್ ನಿರಂಜನ ಹಿರೇಮಠ ಅವರ ಆಪ್ತ ಸಹಾಯಕನಾಗಿದ್ದಾನೆ ಈಗ ಕೊಲೆಯ ನಂತರ ಆತನ ಏಕೆ ಕಾಣಿಸುತ್ತಿಲ್ಲ ಎಂದು ಅಂಜಲಿ ಸಹೋದರಿ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸಿಐಡಿ ಅಧಿಕಾರಿಗಳಿಗೆ ಕೂಡ ಮಾಹಿತಿ ನೀಡಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.ಆದ್ರೆ ಇದುವರೆಗೂ ವಿಜಯ್ ಹಿರೇಮಠ ವಿಚಾರಣೆ ನಡೆದಿಲ್ಲ.ಅಲ್ಲದೆ ಸಮತಾ ಸೇನೆ ಮುಖಂಡ ಗುರುನಾಥ ಉಳ್ಳಿಕಾಶಿ ಕೂಡ ಈ ಆಯಾಮದಲ್ಲಿ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಸಿಐಡಿ ಅಧಿಕಾರಿಗಳು ಯಾವಾಗ ಈ ಬಗ್ಗೆ ತನಿಖೆ ನಡೆಸಲಿದ್ದಾರೆ ಎನ್ನುವುದನ್ನ ಕಾದು ನೋಡಬೇಕಿದೆ.

ಇನ್ನು ಅಂಜಲಿ ಅಂಬಿಗೇರ ಹತ್ಯೆ ನಡೆದ ಸಂದರ್ಭದಲ್ಲಿ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಕೊಲೆ ಪ್ರಕರಣ ಕುರಿತು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು ಅಲ್ಲದೆ ಮೃತ ಕುಟುಂಬಕ್ಕೆ 1 ಲಕ್ಷ ಹಣವನ್ನು ಸಾರ್ವಜನಿಕವಾಗಿ ನೀಡಿದ್ದರು ಇದರ ಬಗ್ಗೆ ಕೂಡ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸುತ್ತಿದ್ದು ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರಹಕಬೇಕಿದೆ.

Leave a Reply

Your email address will not be published. Required fields are marked *