October 18, 2024

ಹುಬ್ಬಳ್ಳಿ: ಪಾಲಿಕೆ‌ ಸದಸ್ಯನ ಕೊಲೆಗೆ ಯತ್ನಿಸಿ ನಾಪತ್ತೆಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ‌ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ‌.‌

2016 ರಲ್ಲಿ ಹು-ಧಾ ಪಾಲಿಕೆ ಸದಸ್ಯ ಆರೀಪ್ ಭದ್ರಾಪೂರ ಹತ್ಯೆಗೆ ಯತ್ನಿಸಿದ ಆರೋಪಿ ಸೈಫ್ ಅಲಿ ಬಾಂಬೆಯನ್ನು ಪೊಲೀಸರು ಬಂಧಿಸಿದ್ದರು. ಆದರೆ 2016 ರಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು, ಎಂಟು ವರ್ಷದಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಲೆಮರೆಸಿಕೊಂಡು ದೇಶಾದ್ಯಂತ ತಿರುಗುತ್ತಿದ್ದ. ಅಲ್ಲದೇ ನಾಪತ್ತೆಯಾಗಿ ಪಕೀರ ವೇಷ ಧರಿಸಿ ದೇಶ ಸುತ್ತಿದ ಸೈಫ್ ಅಲಿ‌ ಬಾಂಬೆಯನ್ನು ಅರೆಸ್ಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *