July 11, 2025
IMG-20240527-WA0007

ಹುಬ್ಬಳ್ಳಿ: ಇತ್ತೀಚೆಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಪ್ರೇಮನಾಥ ಚಿಕ್ಕತುಂಬಳ ಅವರನ್ನು ಕೋಟಿಲಿಂಗ ನಗರ ಅಭಿವೃದ್ಧಿ ಸಂಘದ ವತಿಯಿಂದ ನಗರದ ಮಲ್ಲಿಕಾರ್ಜುನ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ‌ ಸದಾಶಿವಯ್ಯ ಮಠದ ಅವರು ವಹಿಸಿದ್ದರು.‌ ಪಾಲಿಕೆ‌ ಸಧಸ್ಯರಾದ ಚೇತನ ಸ. ಹಿರೇಕೆರೂರ ಅತಿಥಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ದಿವಾಕರ ಕರ್ಲಗೇರಿ, ರಾಜಶೇಖರ ತೆಗ್ಗಿನಮನಿ, ಟಿ ನಾಗಪ್ಪ, ಪ್ರದೀಪ ತೆಗೂರ, ಎನ್ ಎಸ್ ಪಾಟೀಲ, ಕೊಪ್ಪದ, ಉಪ್ಪಿನ ಕುಂದಗೋಳ, ಎಚ ಮ್ಯಾಗೆರಿ, ಡಿ ಹನುಮಂತಪ್ಪ, ಪರಮೇಶಪ್ಪ ಲಿಂಗದಳ್ಳಿ, ಹುಗ್ಗಿ, ಪಾಟೀಲ, ರೆಡ್ಡಿ ಪಾಟೀಲ, ಅಗಡಿ, ಅಣ್ಣಿಗೇರಿ ಜೈನರ ಹಾಗೂ ಅನೇಕ ಮಹಿಳೆಯರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *