September 8, 2024

ಧಾರವಾಡ: ನಗರದಲ್ಲಿ ತಡರಾತ್ರಿ ಮನೆಯ ರೂಮಿನ ಒಳಗೆ ಹೋಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದ ವಿದ್ಯಾಗಿರಿ ಠಾಣೆ ಹದ್ದಿನಲ್ಲಿ ನಡೆದಿದೆ. ಭಾಗ್ಯಶ್ರೀ ಗುರುನಾಥ್ ನಾಶಿ ಎನ್ನುವ ಮಹಿಳೆ ತಮ್ಮ ಮನೆಯ ಮತ್ತೊಂದು ಕೋಣೆಯಲ್ಲಿ ಕದ ಮುಚ್ಚಿಕೊಂಡು ವಿಷ ಸೇವಿಸಿ ತೊಂದರೆ ಆಗುತ್ತಿದ್ದಂತೆ ಕದ ತೆಗೆದು ಹೊರ ಬಂದಾಗ ಗಂಡ ಗುರುನಾಥ್ ಮಕ್ಕಳು ಸೇರಿ ಉಪ್ಪಿನ ನೀರು ಕುಡಿಸಿ ವಾಂತಿ ಮಾಡಿಸುವ ಪ್ರಯತ್ನ ಮಾಡಿದ್ದು ಪಲಕಾರಿಯಾಗದೆ ಆಸ್ಪತ್ರೆ ಒಯ್ಯುವ ರಸ್ತೆ ಮಧ್ಯೆ ಪ್ರಾಣ ಕಳೆದುಕೊಂಡಿದ್ದಾಳೆ.
ಈ ಮಹಿಳೆ ಬೈಲಹೊಂಗಲದವಳೆಂದು ತಿಳಿದು ಬಂದಿದೆ. ಇವಳಿಗೆ ಎರಡು ಮಕ್ಕಳು ಇದ್ದಾರೆನ್ನಲಾಗಿದೆ. ಕಳೆದ ಸುಮಾರು ದಿನಗಳಿಂದ ಗಂಡ ಹೆಂಡತಿ ಮಧ್ಯೆ ಸಣ್ಣಪುಟ್ಟ ಜಗಳ ನಡೆಯುತ್ತಿತ್ತು ಎನ್ನಲಾಗಿದೆ?
ಈ ವಿಷಯ ಸಂಬಂಧಿಸಿದಂತೆ ಎರಡು ಮಕ್ಕಳಿಗೂ ಗೊತ್ತಿತ್ತು ಎಂದು ತಿಳಿದಿದೆ. ಆತ್ಮಹತ್ಯೆ ಮಾಡಿಕೊಂಡ ಭಾಗ್ಯಶ್ರೀಯನ್ನ ಧಾರವಾಡ ಸಿವಿಲ್ ಆಸ್ಪತ್ರೆ ಶವಗಾರದಲ್ಲಿ ಇಡಲಾಗಿದ್ದು ಪೋಸ್ಟ್ ಮಾರ್ಟ೦ ಮಾಡಿದ ನಂತರ ನಿಜಾಂಶ ಹೊರಬರಲಿದೆ. ಈ ಘಟನೆಯ ತಿಳಿದು ಮಹಿಳೆಯ ಸಂಬಂಧಿಕರು ಬೈಲಹೊಂಗಲ ದಿಂದ ಆಗಮಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಗಂಡ ಗುರುನಾಥ್ ನಾಶಿ ಮೇಲೆ ದೂರು ನೀಡಿದ್ದಾರೆ ಎಂದು ತಿಳಿದಿದೆ.
ಪೊಲೀಸರು ಈ ಆತ್ಮಹತ್ಯೆಯ ಕುರಿತು ಗಂಡನನ್ನ ವಿಚಾರಣೆ ಮಾಡುತ್ತಿದ್ದಾರೆಂದು ತಿಳಿದಿದೆ. ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಭಾಗ್ಯಶ್ರೀ ನಾಶಿ ಆತ್ಮಹತ್ಯೆ ಕುರಿತು ವಿದ್ಯಾಗಿರಿ ಪೋಲಿಸ್ ಇನ್ಸೆಕ್ಟರ್ ಅವರು ಪತ್ರಿಕೆಗೆ ಮಾತನಾಡಿ ದೂರು ದಾಖಲೆಸಿಕೊಂಡು ಈ ಆತ್ಮಹತ್ಯೆ ಕುರಿತು ಗುರುನಾಥ್ ನಾಶಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *