September 17, 2024

ಹುಬ್ಬಳ್ಳಿ: ಏಕಾಏಕಿ ವಿದ್ಯುತ್ ಪ್ರವೇಶಿಸಿದ ಪರಿಣಾಮ ಹಾಗೂ ಹೆಸ್ಕಾಂ ಲೈನ್ ಮೆನ್ , ಕಾಂಟ್ರ್ಯಾಕ್ಟರ್‌ ನಿರ್ಲಕ್ಷ್ಯದಿಂದ ಯುವಕನೋರ್ವ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ರಾಯಾಪುರದ ಇಸ್ಕಾನ್ ಬಳಿ ನಡೆದಿದೆ.

ಕರಡಿಕೊಪ್ಪ ಗ್ರಾಮದ ಮಹಮ್ಮದ್ ಅಲಿ ಗಡಾದ್ (24) ಸಾವನ್ನಪ್ಪಿರುವ ದುರ್ದೃವಿ. ನಿನ್ನೆ ಸಾಯಂಕಾಲ ಹೆಸ್ಕಾಂನಿಂದ ಎಲ್‌ಸಿ ತೆಗೆದುಕೊಂಡಿದ್ದೇವೆ ಅಂತ ಸುಳ್ಳು ಹೇಳಿ ಕಾಂಟ್ರ್ಯಾಕ್ಟರ್ ರಾಜೇಶ್ ಕೆಲಸ ಆರಂಭಿಸಿದ್ದ. ಆದರೆ ಏಕಾಏಕಿ ವಿದ್ಯುತ್ ಪ್ರವಹಿಸಿದ ಪರಿಣಾಮ ಲೈನ್ ಕಂಬ ಹಾಕುತ್ತಿದ್ದ ಮಹಮ್ಮದ್ ಸಾವನ್ನಪ್ಪಿದ್ದು, ಮಹಮ್ಮದ್ ಹೆಸ್ಕಾಂ ಕಾಂಟ್ರಾಕ್ಟ‌ರ್ ರಾಜೇಶ್ ಹತ್ತಿರ ಕೆಲಸ ಮಾಡುತ್ತಿದ್ದ.

ಹೆಸ್ಕಾಂನಿಂದ ಎಲ್‌ಸಿ ಪಡೆದಿದ್ದರೆ ಲೈನ್ ಕಂಬ ಹಾಕುವ ವೇಳೆ ಕರೆಂಟ್ ಕಟ್ ಮಾಡಲಾಗಿರುತ್ತದೆ. ಆದರೆ ಲೈನ್ ಮೆನ್ ಹಾಗೂ ಕಾಂಟ್ರ್ಯಾಕ್ಟರ್ ನಿರ್ಲಕ್ಷ್ಯಕ್ಕೆ ಕರಡಿಕೊಪ್ಪ ಗ್ರಾಮದ ಯುವಕ ಬಲಿಯಾಗಿದ್ದಾನೆ. ಧಾರವಾಡದ ವಿದ್ಯಾಗಿರಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದ್ದು, ಮೃತದೇಹವನ್ನು ಹುಬ್ಬಳ್ಳಿಯ ಕಿಮ್ಸ್‌ ಗೆ ರವಾನೆ ಮಾಡಲಾಗಿದೆ.

Leave a Reply

Your email address will not be published. Required fields are marked *