January 13, 2026
IMG_20240515_153709

ಹುಬ್ಬಳ್ಳಿ: ಇಂದು ಬೆಳ್ಳಂಬೆಳಗ್ಗೆ ವೀರಾಪುರ ಓಣಿಯಲ್ಲಿ ನಡೆದ ಅಂಜಲಿ ಹತ್ಯೆ ಇಡೀ ಹುಬ್ಬಳ್ಳಿಯನ್ನೇ ತಲ್ಲಣಗೊಳಿಸಿದೆ‌. ಕಣ್ಣ ಮುಂದೆ ಇದ್ದ ಮಗಳು ಈಗ ಹೆಣವಾಗಿರುವುದನ್ನು ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ‌.
ಅಲ್ಲದೇ ಅಂಜಲಿಯನ್ನು ಕೊಂದ ಆರೋಪಿ ವಿಶ್ವನಾಥ ಭಯದಿಂದಲೇ ಸ್ಥಳದಿಂದ ಓಡಿ ಹೋದ ದೃಶ್ಯಗಳು ಏರಿಯಾದಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೊಲೆ ಮಾಡುವಾಗ ಸಿಸಿಟಿವಿ ಕ್ಯಾಮೆರಾ ಇಲ್ಲದ ಮಾರ್ಗದಿಂದ ಬಂದಿದ್ದ ವಿಶ್ವನಾಥ, ಕೊಲೆ ಮಾಡಿದ ನಂತರ ಅಂಜಲಿಯ ಮನೆಯಲ್ಲಿದ್ದವರ ಕೂಗಾಟದಿಂದ ಭಯಗೊಂಡಿದ್ದ. ತಕ್ಷಣವೇ ಹಂತಕ ವಿಶ್ವನಾಥ ತಾನು ಬಂದ ಮಾರ್ಗದಿಂದ ತೆರಳದೆ ಸಿಸಿ ಕ್ಯಾಮೆರಾಗಳು ಇದ್ದ ಮಾರ್ಗದಿಂದ ಓಡಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *