August 18, 2025
IMG_20240514_103028

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಸೋಮವಾರ ಸಂಜೆ ಹುಬ್ಬಳ್ಳಿಯಲ್ಲಿ ನಡೆದ ಚಾಕು ಇರಿತ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ‌ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೌದು…. ಆರೋಪಿ ರೆಹಮಾನ್ ಅಬ್ದುಲ್ ಬೇಪಾರಿ ಎಂಬಾತ ತನ್ನ ಸ್ನೇಹಿತರೇ ಆದ ಭೀಮಪ್ಪ ಗೊಲ್ಲರ್, ಕಿರಣ ಕಬ್ಬೇರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಪ್ರಕರಣ ವರದಿಯಾಗಿತ್ತು. ಆರೋಪಿಗಾಗಿ ಬಲೆ ಬೀಸಿದ್ದ ಪೊಲೀಸರು ಬೆಳಗ್ಗೆ ರೆಹಮಾನ್ ನನ್ನು ಬಂಧಿಸಿದ್ದಾರೆ.
ಇದೀಗ ಅಶೋಕ ನಗರ ಪೊಲೀಸರು ರೆಹಮಾನ್ ನನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಆರೋಪಿ ರೆಹಮಾನ್ ಗೋಪನಕೊಪ್ಪದ ಗವಿಸಿದ್ದೇಶ್ವರ ಕಾಲೋನಿ ನಿವಾಸಿ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *