September 19, 2024

ಧಾರವಾಡ: 50 ದಿನಗಳ ನ್ಯಾಯಾಂಗ ಬಂಧನದಿಂದ ಇಂದು ಸರ್ವೋಚ್ಚ ನ್ಯಾಯಾಲಯ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ ಅವರಿಗೆ 21 ದಿನಗಳ ಮಧ್ಯಂತರ ಜಾಮೀನು ನೀಡಿದ ಸಂತಸದ ಸುದ್ದಿಯನ್ನು ಆಮ್ ಆದ್ಮಿ ಪಕ್ಷ ಧಾರವಾಡ ತಂಡ ಇವತ್ತು ಸಂಜೆ ಹುಬ್ಬಳ್ಳಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಿಹಿ ಹಂಚಿ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡುತ್ತ ಪಕ್ಷದ ಮುಖಂಡರಾದ ಕುಮಾರ ನೂಲಿವಿಯವರು ಇಡಿ, ಬಿಜೆಪಿ ತಂಡ ಅರವಿಂದ ಕೇಜ್ರಿವಾಲ ಅವರಿಗೆ ವಿನಾಕಾರಣ ಲೋಕಸಭಾ ಚುನಾವಣಾ ಪ್ರಚಾರದಿಂದ ದೂರವಿಡುವ ಗುರಿ ಇಟ್ಟುಕೊಂಡು ಮಾಡಿದ ಕುತಂತ್ರಕ್ಕೆ ನೀರು ಎರದಂತಾಗಿದೆ. ಇಂಡಿಯಾ ಒಕ್ಕೂಟದ ಪ್ರಮುಖ ಮುಖಂಡ ಅರವಿಂದ್ ಕೇಜ್ರಿವಾಲ್ ಅವರನ್ನು ದೂರವಿಟ್ಟರೇ ಆಮ್ ಆದ್ಮಿ ಪಕ್ಷದ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳನ್ನು ಸುಲಭವಾಗಿ ಸೋಲಿಸಬಹುದು ಎಂದು ಉಪಾಯ ಮಾಡಿದ್ದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಬಸವರಾಜ ತೇರದಾಳ, ಮಲ್ಲಪ್ಪ ತಡಸದ, ರೇವಣಸಿದ್ದಪ್ಪ ಹುಬ್ಬಳ್ಳಿ, ಹುಸೇನಬಾಷಾ ತಲೇವಾಡ, ಸಂತೋಷ ಮಾನೆ, ಡೇನಿಯಲ್ ಐಕೋಸ್, ಲತಾ ಐಕೊಸ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *