October 16, 2025
IMG-20240505-WA0016

ಹುಬ್ಬಳ್ಳಿ: ಕಾಂಗ್ರೆಸ್‌ ಅನ್ನು ಬೆಂಬಲಿಸಿದರೆ ದೇಶದಲ್ಲಿ ‘ಇಂಡಿ’ ಕಿಚಡಿ ಸರ್ಕಾರಕ್ಕೆ ಆಸ್ಪದ ಕೊಟ್ಟಂತೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿಯ ವಾರ್ಡ್‌- 69ರಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿ, ದೇಶದಲ್ಲಿ ಬಿಜೆಪಿಯನ್ನು ಬೆಂಬಲಿಸಿದರೆ ಮೋದಿ ನೇತೃತ್ವದ ಗಟ್ಟಿಮುಟ್ಟು ಸರ್ಕಾರ ಇರುತ್ತದೆ. ಕಾಂಗ್ರೆಸ್‌ ಅನ್ನು ಬೆಂಬಲಿಸಿದರೆ ಇಂಡಿ ಕೂಟದ ಕಿಚಡಿ ಸರ್ಕಾರ ನೋಡಬೇಕಾಗುತ್ತದೆ ಎಂದು ಹೇಳಿದರು.
ಬಿಜೆಪಿಯಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ. ಆದರೆ, ಕಾಂಗ್ರೆಸ್ ಇಂಡಿ ಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಯಾರೂ? ಎಂಬುದನ್ನು ಇನ್ನೂ ಘೋಷಿಸಿಲ್ಲ ಎಂದು ಲೇವಡಿ ಮಾಡಿದರು.
ಇಂಡಿ ಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಹೆಸರು ಹೇಳುವ ಧೈರ್ಯ ಅವರಿಗಿಲ್ಲ. ಸ್ವತಃ ರಾಹುಲ್ ಗಾಂಧಿಗೇ ಇಲ್ಲವಾಗಿದೆ. ರಾಹುಲ್ ಅಧಿಕಾರಕ್ಕೆ ಬರುತ್ತೇವೆ ಎನ್ನುತ್ತಿದ್ದಾರೆ. ತಾನೇನು ಮಾತನಾಡೇನೆ ಎಂಬುದೇ ಅವರಿಗೆ ತಿಳಿದಿಲ್ಲ. ಇನ್ನು ಆಡಳಿತ ಹೇಗೆ ನಡೆಸುತ್ತಾರಿವರು? ಎಂದರು.

Leave a Reply

Your email address will not be published. Required fields are marked *