September 17, 2024

ಹುಬ್ಬಳ್ಳಿ: ಚುನಾವಣಾ ಅಧಿಕಾರಿಗಳು ಸ್ವಾಮೀಜಿಗಳ ಸಭೆಗೆ ಅನುಮತಿ ಕೊಡುವುದಾಗಿ ಹೇಳಿ ಕೊನೆ ಕ್ಷಣದಲ್ಲಿ ನಿರಾಕರಿಸಿದ್ದಾರೆ. ಪೊಲೀಸರು, ಚುನಾವಣಾ ಅಧಿಕಾರಿಗಳು ಜೋಶಿಯವರ ಮನೆಯ ಆಳಿನಂತೆ ವರ್ತಿಸುತ್ತಿದ್ದಾರೆ ಸ್ವಾಮೀಜಿಗಳ ಧರ್ಮ ಚಿಂತನೆ ಸಭೆಗೆ ದುರುದ್ದೇಶದಿಂದ ಅಡ್ಡಿಪಡಿಸಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ‌ ಸರ್ಕಾರದವರು ಬ್ರಿಟೀಷ್ ಸರ್ಕಾರದಂತೆ ವರ್ತನೆ ಮಾಡುತ್ತಿದ್ದಾರೆ. ಜೋಶಿಯವರು ಶಾಂತರೀತಿಯಿಂದ ಸಭೆ ಮಾಡಲು ಬಿಟ್ಟಿಲ್ಲ. ಅವರ ವಿರುದ್ಧ ನಮ್ಮ ಧರ್ಮಯುದ್ಧ ಸಾರಿದ್ದೇವೆ ಎಂದು ಫ. ದಿಂಗಾಲೇಶ್ವರ ಸ್ವಾಮೀಜಿ ನಗರದಲ್ಲಿಂದು ಹೇಳಿದರು.

Leave a Reply

Your email address will not be published. Required fields are marked *