ಹುಬ್ಬಳ್ಳಿ : ಕಾಂಗ್ರೆಸ್ ಸರ್ಕಾರ ಕೊಲೆಗಡಕರನ್ನು ಬಂಧನ ಮಾಡಬೇಕು ಅಂದ್ರೆ ನೂರು ಬಾರಿ ಯೋಚನೆ ಮಾಡುತ್ತಾರೆ. ಲವ್ ಜಿಹಾದ್ ನಲ್ಲಿ ತಪಿತಸ್ಥರನ್ನು ಒಳಗೆ ಹಾಕಬೇಕು ಅಂದ್ರೆ ಅಲ್ಪಸಂಖ್ಯಾತರಿಗೆ ನೋವು ಆಗುತ್ತದೆ. ಕಾಂಗ್ರೆಸ್ ಸರ್ಕಾರದ ಇದು ಧೋರಣೆ ಇದೆ ಅಲ್ಲಾ ಅಲ್ಪಸಂಖ್ಯಾತ ತುಷ್ಟಿಕರಣ ರಾಜಕಾರಣ ಅನುಸರಿಸುತ್ತೀದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಕೇರಳಾ ಮಾದರಿ ಯಲ್ಲಿ ಸಾಗುತ್ತಾ ಇದೆ. ಮಹಿಳೆಯರ ವಿರುದ್ಧ ನಡೆಯುವ ಪ್ರಕರಣಗಳು ರಾಜ್ಯ ಸರ್ಕಾರ ಎನ್ನು ಮಾಡುವುದಿಲ್ಲ ಎನ್ನುವುದಾಗಿದ್ದು, ಕಾಂಗ್ರೆಸ್ ಸರ್ಕಾರ ಕಣ್ಣುಮುಚ್ಚಿಕೊಂಡು ಕುಳಿತ್ತುಕೊಂಡಿದೆ. ಕೊಲೆಗಡಕರಿಗೆ ರಾಜ್ಯ ಸರ್ಕಾರ ಆಸರೆ ನೀಡತ್ತಾ ಇದೆ. ಹಿಂದೂ ಕುಟುಂಬಗಳಲ್ಲಿ ಭಯದ ವಾತಾವರಣ ನಿರ್ಮಾಣ ವಾಗಿದೆ. ರಾಜ್ಯ ಸರ್ಕಾರದ ನೀತಿಗಳು ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾಗಿದೆ. ಲವ್ ಜಿಹಾದ್ ಪ್ರಕರಣಗಳು ಜಾಸ್ತಿ ಆಗತ್ತಾ ಇದೆ. ಸದ್ದಾಂ ಹುಸೇನ್ ಪೋಲಿಸ್ ಮೇಲೆ ಹಲ್ಲೆ ಮಾಡಲು ಹೋಗಿದ್ದಾನೆ ಈ ಪ್ರಕರಣ ಇಡೀ ರಾಜ್ಯ ಸರ್ಕಾರ ತೆಲೆ ತಗ್ಗಿಸುವಂತಾಗಿದೆ. ಈ ಎಲ್ಲಾ ಪ್ರಕರಣ ಗಮನಿಸಿದ್ದಾಗ ಮತದಾರರು ತಕ್ಕ ಉತ್ತರ ನೀಡುತ್ತಾರೆ. ಹಿಂದೂ ವಿರುದ್ಧ ಸರ್ಕಾರ ರಾಜ್ಯದಲ್ಲಿ ಎನ್ನು ಇದೆ ಇದ್ದಕ್ಕೆ ತಕ್ಕ ಉತ್ತರ ಮತದಾರರು ಕೊಡುತ್ತಾರೆ. ದೇಶದ ದೃಷ್ಟಿಯಿಂದ, ಅಭಿವೃದ್ಧಿ ದೃಷ್ಟಿಯಿಂದ ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆಗಬೇಕು ಅಂತಾ ಎಲ್ಲರೂ ಬಿಜೆಪಿ ಪರವಾಗಿ ಎಲ್ಲರೂ ಕೈ ಜೋಡಿಸುತ್ತಾರೆ ಎಂಬುದು ನಮ್ಮಗೆ ಸಂಪೂರ್ಣ ವಿಶ್ವಾಸ ಇದೆ. 28 ಕ್ಷೇತ್ರದಲ್ಲಿ ಬಿಜೆಪಿ ಜೆಡಿಎಸ್ ಅಭ್ಯರ್ಥಿ ಗೆಲ್ಲುತ್ತಾರೆ ಎಂಬುದು ಸಂಪೂರ್ಣ ವಿಶ್ವಾಸ ಇದೆ ಎಂದರು.