September 19, 2024

ಧಾರವಾಡ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿ ಅವರು, ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಧಾರವಾಡ ನಗರದ ವಾರ್ಡ್ ೫ (ಸಿದ್ದಾರೂಢ ಕಾಲೋನಿ) ಯಲ್ಲಿ ಮತಯಾಚನೆ ಮಾಡಿದರು. ಇಲ್ಲಿ ಮುಖಂಡರ ಮತ್ತು ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆ ಮತ್ತು ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ವಾರ್ಡಿನ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಅಸೂಟಿ ಅವರು, ಮತಪತ್ರ ಹಾಗೂ ಗ್ಯಾರಂಟಿ ಕಾರ್ಡ್‌ ಗಳೊಂದಿಗೆ ವಾರ್ಡ್ ನ ಪ್ರಮುಖ ಬೀದಿಗಳಲ್ಲಿ ಮತಯಾಚನೆ ಮಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲಿಸಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ  ಶಿವಲೀಲಾ ಕುಲಕರ್ಣಿ, ಅರವಿಂದ ಏಗನಗೌಡರ, ಎಸ್ ಸಿ ಸಿಗ್ಲಿಹಿರೇಮಠ, ಎಸ್ ಆರ್ ಬಾಳನಗೌಡ್ರ, ಎಚ್ ಎಮ್ ಹೂಗಾರ, ಸುರೇಶ ಕುರಡಿಕೇರಿ, ರಮೇಶ ಹಣಮರಟ್ಟಿ, ಸಂತೋಷ ಮೇಟಿ, ಕೃಷ್ಣ ರಣಜಿ, ಕಿಶೋರ ಬಡಿಗೇರ, ನಿಜಾಮ್ ರಾಯಿ, ಮತ್ತು ಪಕ್ಷದ ಹಿರಿಯರು, ಸಿದ್ಧಾರೂಢ ಕಾಲೋನಿ ವಾರ್ಡ್ 05 ರ ಸಮಸ್ತ ಕಾರ್ಯಕರ್ತರು ಮತ್ತು ಯುವಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *