September 20, 2024

ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರಿಂದ ಕಟ್ಟಲ್ಪಟ್ಟ ಪಾರ್ಟಿಯಾಗಿದೆ, ಏಪ್ರಿಲ್ 25-26 ರಂದು ರಾಜ್ಯಾಂಧ್ಯಂತ ವಿಶೇಷ ಮಹಾಅಭಿಯಾನ ಕಾರ್ಯಕ್ರಮ ಕೈಗೊಂಡಿದ್ದೇವೆ. ವಿಶೇಷ ಮಹಾ ಅಭಿಯಾನವು ರಾಷ್ಟ್ರಾಧ್ಯಕ್ಷ ನಡ್ಡಾ ಅವರ ನೇತೃತ್ವದಲ್ಲಿ ನಡೆಯುತ್ತದೆ. ರಾಜ್ಯದ 224 ಕ್ಷೇತ್ರಗಳಿಗೆ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಎರಡು ದಿನಗಳ ಕಾಲ ಪ್ರಚಾರ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯ ವಕ್ತಾರರಾದ ಝೀರಗಿ ಅವರು ಇಂದು ನಡೆದ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.

98 ನಾಯಕರು ಇಡೀ ರಾಜ್ಯದಲ್ಲಿ ಎರಡು ದಿನಗಳ ಪ್ರವಾಸ ಮಾಡಲಿದ್ದಾರೆ. ಬೆಳಗಾವಿ ಉತ್ತರಕ್ಕೆ ಬಿಹಾರದ ಸಂಜೀವ ಚೌರಸಿ ಅವರು ಬರಲಿದ್ದಾರೆ. ದಕ್ಷಿಣ ಕ್ಷೇತ್ರಕ್ಕೆ ಉತ್ತರ ಪ್ರದೇಶ ಡೆಪ್ಯೂಟಿ ಚಿಪ್ ಮಿನಿಸ್ಟರ್ ಕೇಶವ ಪ್ರಸಾದ ಮೌರ್ಯ ಅವರು ಬರಲಿದ್ದಾರೆ ಎಂದರು. ಪ್ರಧಾನ ಮಂತ್ರಿ ಅವರು ಬೆಳಗಾವಿಗೆ ಆಗಮಿಸುತ್ತರುವ ಹಿನ್ನೆಲೆ ಹಾರೂಗೇರಿಯಲ್ಲಿ ಏಪ್ರಿಲ್ 29 ರಂದು ಬೃಹತ್ ಪ್ರಮಾಣದ ಬಿಜೆಪಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸುದೀಪ ಅವರಿಗೆ ಬೆಳಗಾವಿಗೆ ಆಹ್ವಾನ ನೀಡಿದ್ದೇವೆ. ಬರಲು ಒಪ್ಪಿದ್ದಾರೆ, ಯಮಕನಮರಡಿ ಹಾಗೂ ಗೋಕಾಕ ಬರಲಿದ್ದಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *