March 28, 2024

ವಿಜಯಪುರ : ಬಿಜೆಪಿ ಅಜೆಂಡಾಗಳನ್ನು ನಾವು ಒಪ್ಪುವುದಿಲ್ಲ, ಅದಕ್ಕೆ ವಿರುದ್ದ – ಎಐಎಮ್ ಐ ಎಮ್ ಕರ್ನಾಟಕ ರಾಜ್ಯಾಧ್ಯಕ್ಷ ಉಸ್ಮಾನ ಗಣಿ ಹುಮ್ನಾಬಾದ್

ವಿಜಯಪುರ ನಗರದಲ್ಲಿ ಇಂದು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಐಎಮ್ ಐ ಎಮ್ ಕರ್ನಾಟಕ ರಾಜ್ಯಾಧ್ಯಕ್ಷ ಉಸ್ಮಾನ ಗಣಿ ಹುಮ್ನಾಬಾದ ಇವರು, ನಮ್ಮ ಪಕ್ಷ ಬಿಜೆಪಿ ಬಿ ಟೀಮ್ ಅಲ್ಲ. ನಮ್ಮ ಪಕ್ಷ ಬಿಜೆಪಿ ಅಜೆಂಡಾಗಳನ್ನು ಒಪ್ಪುವುದಿಲ್ಲ. ಅದಕ್ಕಾಗಿ ನಮ್ಮ ಪಕ್ಷಕ್ಕೆ ಬಿ ಟೀಮ್ ಸಿ ಟೀಮ್ ಎನ್ನುವುದು ಸತ್ಯಕ್ಕೆ ದೂರ ಎಂದು ಹೇಳಿದರು.

ವಿಜಯಪುರ ನಗರ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಕುರಿತು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು, ಅನ್ಯಾಯದ ವಿರುದ್ಧ, ಜನರ ಹಕ್ಕುಗಳಿಗಾಗಿ ಮತ್ತು ಸಂವಿಧಾನದ ರಕ್ಷಣೆಗಾಗಿ ಹೋರಾಟ ಮಾಡುವವರು ಅರ್ಜಿ ಸಲ್ಲಿಸಬಹುದು. ಅದನ್ನು ಪರಿಗಣಿಸಿ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದೆಂದು ಇವರು ತಿಳಿಸಿದರು.

ಅಲ್ಲದೇ, ಬೆಳಗಾವಿ ನಾರ್ಥ್ ಕ್ಷೇತ್ರಕ್ಕೆ ಲತಿಫ್‌ಖಾನ್ ಪಠಾಣ್, ಹುಬ್ಬಳ್ಳಿ ಧಾರವಾಡ ಈಸ್ಟ್ ಕ್ಷೇತ್ರಕ್ಕೆ ದುರ್ಗಪ್ಪ ಕಾಶಪ್ಪ ಬಿಜವಾಡ್, ಬಸವನ ಬಾಗೇಬಾಡಿಗೆ ಅಲ್ಲಾಬಕ್ಷ ಮೆಹಬೂಬ್‌ಸಾಬ್ ಬಿಜಾಪುರ ಇವರನ್ನು ಕಣಕ್ಕೆ ಇಳಿಸಿರುವಬಗ್ಗೆ ತಿಳಿಸುತ್ತ, ಜನರ ಪರವಾಗಿರುವ ನಮ್ಮ ಹೋರಾಟಕ್ಕೆ ಜನತೆ ಬೆಂಬಲ ಮತ್ತು ಆಶೀರ್ವಾದ ನೀಡಬೇಕು ಅಂತ ವಿನಂತಿಸಿ ಕೊಂಡಿದ್ದಾರೆ

 

Leave a Reply

Your email address will not be published. Required fields are marked *