July 27, 2024

ಹೌದು, ಬೆಳಗಾವ್ ಜಿಲ್ಲೆ ರಾಮದುರ್ಗ ಪಟ್ಟಣದ ಉಮತಾರ ಪ್ಲಾಟನಲ್ಲಿ ನಿನ್ನೆ ಮಧ್ಯಾಹ್ನ ಸುಮಾರು 2:30 ಗಂಟೆಗೆ ಇಬ್ಬರು ದರೋಡೆಕೋರರು ರಾಮದುರ್ಗ್ ಪಟ್ಟಣದ ಉಮತಾರ ಪ್ಲಾಟನಲ್ಲಿ ಶಿವಾನಂದ ಛಾಯಾಪ್ಪಗೋಳ
ಪ್ರೌಢಶಾಲಾ ಶಿಕ್ಷಕ
ಎಂಬವರ ಮನೆಯಲ್ಲಿ ಕೃತ್ಯ ಎಸಗಿದ್ದಾರೆ.

ನಾವು ಪುರಸಭೆಯವರು ಮನೆಗೆ ಉಚಿತವಾಗಿ ಕುಡಿಯುವ ನೀರಿನ ನಳ ಕೂಡಿಸುತ್ತೇವೆ ಎಂದು ಹೇಳಿ ಮನೆಯಲ್ಲಿ ಒಬ್ಬಂಟೆ ವೃದ್ಧ ಮಹಿಳೆಯನ್ನು ಯಾಮಾರಿಸಿ ಮನೆಯಲ್ಲಿದ್ದ ಸುಮಾರು 21ತೊಲಿ ಬಂಗಾರ ಮತ್ತು ಮೂರು ಸಾವಿರ ರೂಪಾಯಿ ದರೋಡೆ ಮಾಡಿದ್ದಾರೆ.

ಈ ಘಟನೆ ಮಧ್ಯಾಹ್ನ ಸುಮಾರು 2:30 ಗಂಟೆಗೆ ನಡದಿದೆ.

ಘಟನಾ ಸ್ಥಳಕ್ಕೆ ರಾಮದುರ್ಗ PSI ಶಿವಾನಂದ್ ಕಾರಜೋಳ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು

Leave a Reply

Your email address will not be published. Required fields are marked *