September 17, 2024

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ಬಳಿ ಘಟನೆ, ಬುಲೋರೊ ವಾಹನ ಮರಕ್ಕೆ ಡಿಕ್ಕಿ ಹೊಡೆದು 6 ಜನ ದುರ್ಮರಣ ಹೊಂದಿದ್ದಾರೆ. ಘಟನೆಯಲ್ಲಿ 5 ಜನ ಸ್ಥಳದಲ್ಲಿ ಸಾವನಪ್ಪಿದ್ದು, ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನಪ್ಪಿದ್ದಾರೆ.

ಬುಲೋರೋ ವಾಹನದಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹೊರಟಿದ್ದ ವೇಳೆ ಅಪಘಾತ ಸಂಬವಿಸಿದ್ದು, ಪಾದಯಾತ್ರೆ ಮೂಲಕ ಹೊರಟಿದ್ದ ಭಕ್ತರನ್ನ ಹತ್ತಿಸಿಕೊಂಡಿದ್ದ ಬುಲೋರೋ ವಾಹನ ಚಾಲಕ. ಭಕ್ತರನ್ನ ಹತ್ತಿಸಿಕೊಂಡು ಹೋಗುವ ಕೆಲವು ನಿಮಿಷಗಳಲ್ಲೆ ಭೀಕರ ಅಪಘಾತ.

ಹನುಮವ್ವ ಮೇಗಾಡಿ(25),ದೀಪಾ(31),ಕುಮಾರಿ ಸವಿತಾ(17), ಕುಮಾರಿ ಸುಪ್ರಿತಾ(11),ಮಾರುತಿ(42),ಇಂದ್ರವ್ವಾ(24) ಮೃತ ದುರ್ದೈವಿಗಳು

ಮೃತರೆಲ್ಲಾ ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದವರು, ಹುಲಕುಂದ ಗ್ರಾಮದಿಂದ ಸುಮಾರು 23 ಜನ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಪಾದಯಾತ್ರೆ ಹೊರಟಿದ್ದರು. ಉಳಿದ ಗಾಯಾಳುಗಳನ್ನ ಗೋಕಾಕ್ ಮತ್ತು ರಾಮದುರ್ಗ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಘಟನಾ ಸ್ಥಳಕ್ಕೆ ಎಸ್‌ಪಿ ಡಾ.ಸಂಜೀವ್ ಪಾಟೀಲ್ ಭೇಟಿ ಪರಿಶೀಲನೆ ಮಾಡಿದರು. ರಾಮದುರ್ಗ ತಾಲೂಕಿನ ಕಡಕೋಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *