September 8, 2024

ಚಾಮರಾಜನಗರ: ರೌಡಿಗಳಂತೆ ಸಾರ್ವಜನಿಕ ಸ್ಥಳದಲ್ಲಿ ಕೆಎಸ್​ಆರ್​ಟಿಸಿ ಬಸ್​ ನಿರ್ವಾಹಕ, ಪೇದೆಗಳಿಬ್ಬರು ಹೊಡೆದಾಡಿಕೊಂಡಿಕೊಂಡ ವಿಡಿಯೋ ವೈರಲ್‌ ಆಗಿದೆ.
ಕೆಎಸ್​​ಆರ್​​ಟಿಸಿ ಬಸ್​ ಹಿಮವದ್ ಗೋಪಾಲಸ್ವಾಮಿ ಬೆಟ್ಟದಿಂದ ಗುಂಡ್ಲುಪೇಟೆಗೆ ಬರುತ್ತಿತ್ತು. ಈ ಬಸ್​ನಲ್ಲಿ ಮೈಸೂರಿನ ಪೊಲೀಸ್​ ಪೇದೆ ಕೊಟ್ರೇಶ್ ಐನಾಳ್ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ.
ಈ ನಡುವೆ ಬಸ್​ನ ನಿರ್ವಾಹಕ ಲೋಕೇಶ್ ಅವರು ಪೊಲೀಸ್​ ಪೇದೆ ಕೊಟ್ರೇಶ್ ಐನಾಳ್ ಅವರಿಗೆ ಗೊತ್ತಿಲ್ಲದೆ ಎರಡು ಬಾರಿ ಟಿಕೆಟ್ ನೀಡಿದ್ದಾರೆ. ಇದನ್ನು ಪೊಲೀಸ್​ ಪೇದೆ ಕೊಟ್ರೇಶ್ ಐನಾಳ್ ಪ್ರಶ್ನಿಸಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಇಬ್ಬರೂ ಚಾಮರಾಜನಗರನಗರದ ಗುಂಡ್ಲುಪೇಟ್‌ ಬಸ್‌ ನಿಲ್ದಾಣದ ಬಳಿ ಬಂದಾಗ ಇಬ್ಬರು ಕೂಡ ರೌಡಿಗಳಂತೆ ನಾವು ಸಾರ್ವಜನಿಕರ ಕೆಲಸದಲ್ಲಿ ಇರುವುದನ್ನು ಮರೆತು ಮೈಕೈಗುದ್ದುಕೊಂಡಿದ್ದಾರೆ. ಈ ನಡುವೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದ್ದು, ಪೊಲೀಸರು ಸಂಧಾನ ಮಾಡಿ ಇಬ್ಬರನ್ನು ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.

 

Leave a Reply

Your email address will not be published. Required fields are marked *