January 13, 2026
IMG-20240524-WA0004

ಹುಬ್ಬಳ್ಳಿ: ಅಂಜಲಿ ಕೊಲೆ ಪ್ರಕರಣದ ಆರೋಪಿ ವಿಶ್ವ ಅಲಿಯಾಸ್ ಗಿರೀಶ ನನ್ನು ಸಿಐಡಿ ಅಧಿಕಾರಿಗಳು ವೀರಾಪುರ ಓಣಿಯಲ್ಲಿನ ಅಂಜಲಿ ಮನೆಗೆ ಕರೆತಂದು ಸ್ಥಳ ಮಹಜರನ್ನು ಮಾಡಲಾಯಿತು.

9 ಜನ ಸಿಐಡಿ ಅಧಿಕಾರಿಗಳು ಆರೋಪಿಯನ್ನು ಬಿಗಿ ಭದ್ರತೆಯ ನಡುವೆ ಕರೆ ತಂದು ಸ್ಥಳ ಮಹಜರನ್ನು ಮಾಡಲಾಗುತ್ತಿದ್ದು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಕೊಲೆ ಮಾಡುವ ಸಂದರ್ಭದಲ್ಲಿ ವಿಶ್ವ ಎಲ್ಲಿಂದ ಬಂದಿದ್ದ ಎಲ್ಲಿ ಆಟೋ ನಿಲ್ಲಿಸಿ ಅಂಜಲಿ ಮನೆಗೆ ಬಂದ ಎಂಬುದನ್ನು ಸ್ಥಳ ಮಹಜರನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಕೊಲೆಗಾರ ವಿಶ್ವ ನನ್ನು ನೋಡಲು ಏರಿಯಾದ ಜನರು ಗುಂಪು ಗುಂಪಾಗಿ ನೋಡಲು ಬಂದಿದ್ದು.ಸಿಐಡಿ ಅಧಿಕಾರಿಗಳು ಇಂದು ಕೊಲೆಯಾದ ಸ್ಥಳವನ್ನು ಮಹಜರು ಮಾಡಿ ಆತನನ್ನು ಮೈಸೂರಿಗೆ ಕರೆದೊಯ್ಯಲ್ಲಿದ್ದಾರೆ.

Leave a Reply

Your email address will not be published. Required fields are marked *