September 17, 2024

ಹುಬ್ಬಳ್ಳಿ: ಹುಬ್ಬಳ್ಳಿ ಅಂಜಲಿ ಅಂಬಿಗೇರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಂತಕ ವಿಶ್ವ ಅಲಿಯಾಸ್ ಗಿರೀಶನನ್ನು ಸಿಐಡಿ ತೀವ್ರ ವಿಚಾರಣೆ ನಡೆಸುತ್ತಿದೆ..
ಹುಬ್ಬಳ್ಳಿ ಪ್ರವಾಸಿ ಮಂದಿರದಲ್ಲಿ ವಿಶ್ವನನ್ನು ಸಿಐಡಿ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಮುಂಜಾನೆ ಬೆಂಡಿಗೇರಿ ಪೊಲೀಸ್ ಠಾಣೆಯಿಂದ ಐಬಿಗೆ ಕರೆದುಕೊಂಡು ಬಂದು ವಿಚಾರಣೆ ಮಾಡಲಾಗಿದೆ.
ಮೇ 15ರಂದು ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಗಿರೀಶ್ ಅಂಜಲಿಯನ್ನು ಹತ್ಯೆ ಮಾಡಿದ್ದ.
ಆರೋಪಿ ಗಿರೀಶ್‌ನನ್ನು ಸಿಐಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರ ಮುಂದೆ ಗಿರೀಶ್ ಕೈ ಮುಗಿದು ಕಣ್ಣೀರು ಹಾಕಿದ್ದಾನೆ. ಅದಕ್ಕೆ ನ್ಯಾಯಾಧೀಶರು, ಇದೆಲ್ಲ ಇಂಥ ಕೆಲಸ ಮಾಡುವ ಮುನ್ನ ಗೊತ್ತಾಗಲಿಲ್ಲವಾ ಎಂದು ಗದರಿದ್ದಾರೆ.
ಇನ್ನು ಆರೋಪಿಯನ್ನು ಮತ್ತೆ ವಶಕ್ಕೆ ಪಡೆಯಲು ಸಿಐಡಿ ಅವಕಾಶ ಕೇಳಿದೆ. 15 ದಿನ ಕಸ್ಟಡಿಗೆ ತೆಗೆದುಕೊಳ್ಳಲು ಸಿಐಡಿ ಅಧಿಕಾರಿಗಳು ಅವಕಾಶ ಕೇಳಿದ್ದು, 8 ದಿನಗಳ ಕಾಲ ಸಿಐಡಿ ಕಸ್ಟಡಿ ನ್ಯಾಯಾಧೀಶರು ಅವಕಾಶ ನೀಡಿದ್ದಾರೆ.
ಒಂದನೇ ಹೆಚ್ಚುವರಿ ದಿವಾಣಿ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶ ನಾಗೇಶ್ ನಾಯ್ಕ್ ಆದೇಶ ನೀಡಿದ್ದು, ಕಸ್ಟಡಿಗೆ ನೀಡುತ್ತಿದಂತೆ ಮತ್ತೆ ಬೆಂಡಿಗೇರಿ ಪೊಲೀಸ್ ಠಾಣೆಗೆ ಆರೋಪಿಯನ್ನು ಸಿಐಡಿ ಟೀಂ ಕರೆದೊಯ್ದಿದೆ.

Leave a Reply

Your email address will not be published. Required fields are marked *