January 13, 2026
109924998

ಕುಂದಗೋಳ : ಅತಿ ವೇಗವಾಗಿ ಕಾರು ಚಾಲನೆ ಮಾಡಿದ ಚಾಲಕ ಕಾರನ್ನು ನಿಯಂತ್ರಣ ಮಾಡಲಾಗದೇ ಮರಕ್ಕೆ ಡಿಕ್ಕಿಪಡಿಸಿ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯ ಪಡಿಸಿದ ಬಗ್ಗೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೌದು ! ಹುಬ್ಬಳ್ಳಿ ಲಕ್ಷ್ಮೀಶ್ವರ ರಾಜ್ಯ ಹೆದ್ದಾರಿಯ ಶಿರೂರು ಗ್ರಾಮದ ಬಳಿಯ ರಸ್ತೆ ಮಧ್ಯೆ ಮಂಜುನಾಥ ನಾರಾಯಣ ನಾಝರೆ ಎಂಬಾತ ಅತಿ ಜೋರಿನಿಂದ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬಂದು ನಿಯಂತ್ರಣ ಮಾಡಲಾಗದೆ ರಸ್ತೆ ಬದಿ ತಗ್ಗಿಗೆ ನುಗ್ಗಿಸಿ ಮರಕ್ಕೆ ಡಿಕ್ಕಿಪಡಿಸಿ ಮೇ.02 ರಂದು ಅಪಘಾತ ಮಾಡಿದ್ದಾನೆ.

ಈ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ಜನರಿಗೆ ಗಾಯಗಳಾಗಿದ್ದು, ಕಾರು ಜಖಂಗೊಂಡಿದೆ. ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *