September 19, 2024

ರಾಜ್ಯದಲ್ಲಿ ಚುನಾವಣಾ ರಣಕಣ ಮತ್ತಷ್ಟು ರಂಗೇರಲಿದ್ದು .ರಾಜ್ಯದಲ್ಲಿ ಮತದಾನ ದಿನ ಹತ್ತಿರವಾಗುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ಘಟಾನುಘಟಿಗಳು ಪ್ರಚಾರದಲ್ಲಿ ತೊಡಗಿಸಿ ಕೊಂಡಿರುವುದು ಸಾಮಾನ್ಯವಾಗಿದೆ . ಈ ನಡುವೆ ಬುಧವಾರ ಬೆಳಗಾವಿಯ ಸಾ೦ಬ್ರಾ ವಿಮಾನ ನಿಲ್ದಾಣದಲ್ಲಿ ಸಿ ಎಂ ಬಸವರಾಜ ಬೊಮ್ಮಾಯಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕಸ್ಮಿಕವಾಗಿ ಮುಖಾಮುಕಿಯಾಗಿದ್ದರೆ .
ಈ ಸಂದರ್ಭ ಇಬ್ಬರೂ ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಇದೆ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಿಎಂ ಬೊಮ್ಮಾಯಿಗೆ ಬೆನ್ನು ತಟ್ಟಿದ್ದಾರೆ. ಕೆಲ ಕ್ಷಣ ಇಬ್ಬರು ನಗು ನಗುತ್ತಲೇ ಮಾತನಾಡುತ್ತಾ ಹಸ್ತಲಾಘವ ಮಾಡಿ ಅಲ್ಲಿಂದ ತೆರಳಿದ್ದಾರೆ. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಸ್ತಾನಿಯ ನಾಯಕರು ಉಪಸ್ತಿತರಿದ್ದರು.

 

Leave a Reply

Your email address will not be published. Required fields are marked *