MP Jagadish Shettar has slammed the Karnataka government over severe financial distress, stalled development, and escalating internal conflicts between party leaders, warning that more political exits could happen soon.
ಬೆಳಗಾವಿ: ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ದಿವಾಳಿಯಾಗಿದೆ ಎಂದು ದೂರಿದ ಸಂಸದ ಜಗದೀಶ್ ಶೆಟ್ಟರ್, ಆಡಳಿತ ಪಕ್ಷದಲ್ಲಿನ ಆಂತರಿಕ ಕಲಹದಿಂದಾಗಿ ರಾಜ್ಯದಲ್ಲಿ ಅಸ್ಥಿರ ಸರ್ಕಾರವಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದರು. ಪ್ರಮುಖಾಂಶಗಳ ವಿವರ ಇಲ್ಲಿದೆ:
ಆರ್ಥಿಕ ಮುಗ್ಗಟ್ಟು ಮತ್ತು ಅಭಿವೃದ್ಧಿ ಶೂನ್ಯ
-
ಖಜಾನೆಯಲ್ಲಿ ಹಣವಿಲ್ಲ: ಸರ್ಕಾರದ ಖಜಾನೆಯಲ್ಲಿ ಒಂದು ಪೈಸೆ ಹಣವಿಲ್ಲದ ಕಾರಣ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಶೆಟ್ಟರ್ ಟೀಕಿಸಿದರು.
-
ಇಂಧನವಿಲ್ಲದ ಕಾರುಗಳು: ಸರ್ಕಾರಿ ಕಾರುಗಳಿಗೆ ಡೀಸೆಲ್-ಪೆಟ್ರೋಲ್ ಹಾಕಿಸದ ದುಸ್ಥಿತಿ ನಿರ್ಮಾಣವಾಗಿದೆ. ಕಳೆದ 8 ತಿಂಗಳಿಂದ ಪೆಟ್ರೋಲ್ ಬಂಕ್ಗಳವರಿಗೆ ಹಣ ಪಾವತಿಸದ ಕಾರಣ, ಅವರು ಇಂಧನ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
-
ಬಾಕಿ ಬಿಲ್ಗಳು: ಗುತ್ತಿಗೆದಾರರಿಗೆ ನೀಡಬೇಕಾದ ಸುಮಾರು 30,000 ಕೋಟಿ ರೂಪಾಯಿಗಳ ಬಿಲ್ ಬಾಕಿ ಉಳಿದಿದೆ ಎಂದು ತಿಳಿಸಿದರು.
ಜನಪ್ರತಿನಿಧಿಗಳ ಪ್ರವಾಸದ ಬಗ್ಗೆ ವ್ಯಂಗ್ಯ
-
ಜನರ ದಿಕ್ಕು ತಪ್ಪಿಸುವ ಯತ್ನ: ರಾಜ್ಯದಲ್ಲಿ ಗಂಭೀರ ಪರಿಸ್ಥಿತಿ ಇAದರೂ, ಮಂಗಳೂರು ಮತ್ತು ಬೀದರ್ ಸುತ್ತಾಡುವ ಮೂಲಕ ಕೇವಲ ಜನರಿಗೆ ತೋರಿಸುವ ಪ್ರಹಸನ ನಡೆಯುತ್ತಿದೆ ಎಂದರು.
-
ಮುಖ್ಯಮಂತ್ರಿಗಳ ಸ್ಪರ್ಧೆ: ಸಿದ್ದರಾಮಯ್ಯ ಅವರನ್ನು ಓವರ್ಟೇಕ್ ಮಾಡಿದ್ದೇನೆ ಎಂದು ಬಿಂಬಿಸಿಕೊಳ್ಳಲು ಆಡಳಿತರೂಢ ನಾಯಕರು ರಾಜ್ಯ ಸುತ್ತುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಡಿ.ಕೆ. ಶಿವಕುಮಾರ್ ಎಷ್ಟೇ ಕಸರತ್ತು ನಡೆಸಿದರೂ ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದರು.
ಕಾಂಗ್ರೆಸ್ನಲ್ಲಿ ಆಂತರಿಕ ಕಲಹ ಹಾಗೂ 'ಇನ್-ಫೈಟಿಂಗ್'
-
ಅಭಿಪ್ರಾಯ ಭೇದ: ಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ನಡುವೆ ಉತ್ತಮ ಅಭಿಪ್ರಾಯವಿಲ್ಲ. ಪರಸ್ಪರ ಗುದ್ದಾಟದಿಂದಾಗಿ ಪಕ್ಷದಲ್ಲಿ 'ಇನ್-ಫೈಟಿಂಗ್' ಜೋರಾಗಿದೆ ಎಂದು ಹೇಳಿದರು.
-
ಸ್ಫೋಟಗೊಳ್ಳಲಿರುವ ಅಸಮಾಧಾನ: ಸಿದ್ದರಾಮಯ್ಯ ಅವರು ನಿಧಾನವಾಗಿ ಕೆಲವು ಚಟುವಟಿಕೆಗಳನ್ನು ಆರಂಭಿಸಿದ್ದು, ಈ ಆಂತರಿಕ ಅಸಮಾಧಾನ ಯಾವಾಗ ಬೇಕಾದರೂ ಸ್ಫೋಟಗೊಳ್ಳಬಹುದು. ರಾಜ್ಯದಲ್ಲಿ ಅಸ್ಥಿರ ಸರ್ಕಾರ ನೆಲೆಸಿದೆ ಎಂದರು.
ಇಡಿ (ED) ತನಿಖೆ ಮತ್ತು ರಾಜಕೀಯ ಬೆಳವಣಿಗೆಗಳು
-
ರಾಜಕೀಯ ಪ್ರೇರಿತವಲ್ಲ: ಇಡಿ ಅಥವಾ ಸಿಬಿಐ ಯಾವುದೇ ಕ್ರಮ ಕೈಗೊಂಡರೂ, ಅವು ಸಂಪೂರ್ಣ ಮಾಹಿತಿಯನ್ನು ಕಲೆಹಾಕಿಯೇ ಮಾಡುತ್ತವೆ. ಇದರಲ್ಲಿ ಯಾವುದೇ ರಾಜಕೀಯ ಸೇಡಿನ ಹಿನ್ನೆಲೆ ಇಲ್ಲ ಎಂದು ಸ್ಪಷ್ಟಪಡಿಸಿದರು.
-
ಮುಂದಿನ ವಿಕೆಟ್ಗಳು ಪತನ: ಕಾಂಗ್ರೆಸ್ ಪಕ್ಷದಲ್ಲೇ ಶತ್ರುಗಳು ಪಕ್ಕದಲ್ಲೇ ಇದ್ದಾರೆ. ಆಂತರಿಕ ಕಚ್ಚಾಟದಿಂದಾಗಿ ಮುಂದಿನ ದಿನಗಳಲ್ಲಿ ಯಾವಾಗ ಬೇಕಾದರೂ ಮೂರ್ನಾಲ್ಕು ವಿಕೆಟ್ಗಳು (ಪ್ರಮುಖ ರಾಜಕೀಯ ನಾಯಕರು) ಬೀಳಬಹುದು. ಸತೀಶ್ ಜಾರಕಿಹೊಳಿ ಅವರ ಮೇಲಿನ ದಾಳಿಗೂ ಕಾಂಗ್ರೆಸ್ನವರೇ ದಾಖಲೆಗಳನ್ನು ನೀಡಿ ರೇಡ್ ಮಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.